ಬಂಟ್ವಾಳ : ನಡುಮೊಗರು ಯುವಕಮಂಡಲ ಇದರ ವತಿಯಿಂದ ವಿದ್ಯುತ್ ಶಾಕ್ ತಗುಲಿ ಚೇತರಿಸಿಕೊಳ್ಳುತ್ತಿರುವ ಡೆಚ್ಚಾರು ಭಾಸ್ಕರ ಬಂಗೇರಾ ಅವರು ಸಂಘದ ಕಾರ್ಯಕರ್ತರಾಗಿ ಅನೇಕ ವರ್ಷದಿಂದ ಸಮಾಜ ಸೇವೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾರೆ . ಅವರಿಗೆ ರೂ.13000(ಹದಿಮೂರು ಸಾವಿರ) ಧನಸಹಾಯವನ್ನು ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಯುವಕ ಮಂಡಲದ ಅಧ್ಯಕ್ಷ ವಿನಯಕುಮಾರ್ , ಕಾರ್ಯದರ್ಶಿ ರವೀಶ್ ಕುಮಾರ್ ಡೆಚ್ಚಾರ್, ಖಜಾಂಚಿ ಜೋಸೆಫ್ ಪಟ್ಲ, ಕ್ರೀಡಾ ಕಾರ್ಯದರ್ಶಿ ಸುದರ್ಶನ್ ಹಟದಡ್ಕ, ಜತೆ ಕಾರ್ಯದರ್ಶಿ ರುಷೇದ್, ಹರಿಪ್ರಸಾದ್ ಮತ್ತು ಸಂಘದ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

