ಉಡುಪಿ:ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ರಜತ ಸಂಭ್ರಮದ ಸಮಾರೋಪ ಸಮಾರಂಭ, ರಾಜ್ಯಮಟ್ಟದ ಛಾಯಾಗ್ರಾಹಕರ ಸಮ್ಮೇಳನ ಹಾಗೂ ಅಂತರಾಷ್ಟ್ರೀಯ ಮಟ್ಟದ ವಸ್ತುಪ್ರದರ್ಶನ ಮಾರಾಟವು ಅ.9 ಶುಕ್ರವಾರ ಹಾಗೂ ಅ.10ಶನಿವಾರ ಅಮ್ಮಣ್ಣಿ ಶೆಟ್ಟಿ ಸಭಾಂಗಣ ಉಡುಪಿಯಲ್ಲಿ ನಡೆಯಿತು.

ಉಡುಪಿ ಜಿಲ್ಲಾ ಪೋಲೀಸ್ ಅಧೀಕ್ಷಕರು ಅಣ್ಣಾಮಲೈ ವಾಹನಾ ಜಾಥಕ್ಕೆ ಚಾಲನೆ ನೀಡಿದರು. ರಜನ ಸಂಭ್ರಮದ ಸಮಾರೋಪ ಸಮಾರಂಭದ ಉದ್ಘಾಟನೆಯನ್ನು ನಗರಾಭಿವೃದ್ದಿ ಮತ್ತು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ್ ಸೊರಕೆ ಉದ್ಘಾಟಿಸಿದರು. ಅಂತರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ ಉದ್ಘಾಟನೆಯನ್ನು ದ.ಕ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಆರೋಗ್ಯ ಸಚಿವ ಯು.ಟಿ ಖಾದರ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿದರು.ಅಧ್ಯಕ್ಷತೆಯನ್ನು ಸೌತ್ ಕೆನರಾ ಪೋಟೋಗ್ರಾಫರ್ಸ್ ಅಸೋಸಿಯೇಶನ್ ಅದ್ಯಕ್ಷರು ಕೆ. ವಾಸುದೇವ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ಪ್ರಮೋದ್ ಮದ್ವರಾಜ್, ಮಾಜಿ ಸಚಿವ ಶ್ರೀನಿವಾಸ ಪೂಜಾರಿ, ಪ್ರವರ್ತಕರು ನಾಡೋಜ ಜಿ.ಶಂಕರ್ ಉಪಸ್ಥಿತರಿದ್ದರು. ರಾಜ್ಯಮಟ್ಟದ ಛಾಯಾಗ್ರಾಹಕರ ಸಮ್ಮೇಳನ ಉದ್ಘಾಟನೆಯನ್ನು ಕ್ರೀಡಾ ಸಚಿವ ಅಭಯಚಂದ್ರಜೈನ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಕೆ.ವಾಸುದೇವ ರಾವ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲೋಕ ಸಭಾ ಸದಸ್ಯೆ ಶೋಭಾ ಕರಂದ್ಲಾಜೆ, ಆಳ್ವಾಸ್ ಸಂಸ್ಥೆಯ ಮೋಹನ್ ಆಳ್ವ, ಚಲನಚಿತ್ರ ಸಂಗೀತ ನಿದರ್ೇಶಕ ಗುರುಕಿರಣ್, ಐವನ್ ಡಿ’ಸೋಜಾ, ಶಶಿಧರ್, ಹನುಮಾನ್ ಸಂಸ್ಥೆಯ ಚೆರ್ಮೆನ್ ವಿಲಾಶ್ ನಾಯಕ್, ಉಪಸ್ಥಿತರಿದ್ದರು. ರಜತ ಸಂಭ್ರಮದ 25ನೇ ವಾಷರ್ಿಕ ಮಹಾಸಭೆಯ ಉದ್ಘಾಟನೆಯನ್ನು ಮುಖ್ಯ ಸಚೇತಕರು ಕನರ್ಾಟಕ ಸರಕಾರ ಸುನೀಲ್ ಕುಮಾರ್ ಉದ್ಘಾಟಿಸಿದರು. ಕೆ.ವಾಸುದೇವ ರಾವ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತುಳು ಕೂಟ ಉಡುಪಿ ಅಧ್ಯಕ್ಷರು ಜಯಕರ ಶೆಟ್ಟಿ ಇಂದ್ರಾಳಿ, ಹೊಟೇಲ್ ಕಿದಿಯೂರು ವ್ಯವಸ್ಥಾಪಕ ನಿದರ್ೇಶಕರು ಭುವನೇಂದ್ರ ಕಿದಿಯೂರು, ಪತ್ರಕರ್ತರ ಸಂಘದ ಜಗನಾಥ ಶೆಟ್ಟಿ ಬಾಳ, ಜಯಕರ ಸುವರ್ಣ ಉಪಸ್ಥಿರಿದ್ದರು










