ಬಂಟ್ವಾಳ : ತಾಲೂಕು ಸಿದ್ಧಕಟ್ಟೆ ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಸಮಾಜ ಸೇವಾ ಸಂಘದ ಅಧ್ಯಕ್ಷರಾಗಿ ಸತತ 5ನೇ ಬಾರಿಗೆ ಅವಿರೋಧವಾಗಿ ಯು. ಗೋಪಾಲ ಬಂಗೇರ ಅವರು ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ದೇಜಪ್ಪ ವಿ. ಪೂಜಾರಿ, ಕಾರ್ಯದರ್ಶಿಯಾಗಿ ಎಂ. ಜನಾರ್ಧನ ಬಂಗೇರ, ಜೊತೆ ಕಾರ್ಯದರ್ಶಿಯಾಗಿ ಕೆ. ಲೋಕೇಶ್ ಪೂಜಾರಿ, ಕೋಶಾಧಿಕಾರಿಯಾಗಿ ಜೀವಂದರ್ ಸಾಲಿಯಾನ್ ಆಯ್ಕೆಯಾಗಿರುತ್ತಾರೆ.
