ಬಂಟ್ವಾಳ: ಪರಂಗಿಪೇಟೆ ಸಾರ್ವಜನಿಕ ಗಣೇಶೋತ್ಸವ ಅಂಗವಾಗಿ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಜೈ ಹನುಮಾನ್ ಶಾಖೆ ಮಜಿ ತುಂಬೆ, ಇದರ ವತಿಯಿಂದ 2ನೇ ವರ್ಷದ ಅರುಣಾಸುರ ವಧೆ ಟ್ಯಾಬ್ಲೋ ಪದರ್ಶಸಿದರು.

ಭಜರಂಗದಳ ದಕ್ಷಿಣ್ ಪ್ರಾಂತ ಸಂಚಾಲಕ ಶರಣ್ ಪಂಪ್ವೆಲ್ ತೆಂಗಿನಕಾಯಿ ಒಡೆದು ಚಾಲನೆ ನೀಡಿದರು. ಈ ಸಂದರ್ಭ ಸಂಘಟನೆಯ ಪ್ರಮುಖರಾದ ವಿಜೇತ್ ತುಂಬೆ, ಗುರುರಾಜ್ ಬಂಟ್ವಾಳ, ಭರತ್ ಕುಮ್ಡೇಲ್, ಪ್ರದೀಪ್ ಅಜ್ಜಿಬೆಟ್ಟು, ಮಿಥುನ್ ಕಲ್ಲಡ್ಕ, ಪುನೀತ್ ಪಂಪ್ವೆಲ್ ಮತ್ತಿತರರು ಉಪಸ್ಥಿತರಿದ್ದರು.
