ಕಿನ್ನಿಗೋಳಿ: ಕಿನ್ನಿಗೋಳಿಯ ರಾಜರತ್ನಪುರ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ಪೂಜಿಸಲ್ಪಟ್ಟ ವಿನಾಯಕನನ್ನು ಕಟೀಲಿನ ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು.
ಕಿನ್ನಿಗೋಳಿ ಸಮೀಪದ ರಾಜರತ್ನಪುರ ದಲ್ಲಿ ಕಳೆದ 29 ನೇ ವರ್ಷ ದಿಂದ ಪೂಜಿಸಲ್ಪಡುತ್ತಿದ್ದು, ಪ್ರತೀವರ್ಷ ಎರಡು ದಿನಗಳು ತ್ರಿಕಾಲ ಪೂಜೆ ನಡೆದು ಎರಡನೇ ದಿನ ವಿಸರ್ಜಿಸಲಾಗುತ್ತದೆ, ಅದರಂತೆ, ನಿನ್ನೆ ರಾಜರತ್ನಪುರದಿಂದ ಹೊರಟ ವಿಸರ್ಜನಾ ಮೆರವಣಿಗೆ ಕಿನ್ನಿಗೋಳಿ ಬಸ್ಟಾಂಡ್ ಸುತ್ತುವರಿದು, ಉಲ್ಲಂಜೆ ಮೂಲಕ ಸಾಗಿ ಕಟೀಲು ನಂದಿನಿ ನದಿಯಲ್ಲಿ ವಿಸರ್ಜಿಸಲಾಯಿತು, ಮೆರವಣಿಗೆ ಉದ್ದಕ್ಕೂ ಸ್ತಬ್ದ ಚಿತ್ರಗಳು, ಚೆಂಡೆ, ಹುಲಿವೇಷಗಳು ಗಮನ ಸೆಳೆದಿದ್ದು, ಸಾವಿರಾರು ಜನ ಮೆರವಣುಗೆಯಲ್ಲಿ ಪಾಲ್ಗೊಂಡರು.



