* ಹುಮ್ನಾಬಾದ್ ತಾಲೂಕಿನಲ್ಲಿ ಮತಯಂತ್ರ ದೋಷದಿಂದ ಮತ ಚಲಾಯಿಸುವುದಕ್ಕೆ ಸಾಧ್ಯವಾಗಲಿಲ್ಲ. ವಾರ್ಡ್ ನಂ. 14ರಲ್ಲಿ ಮತಯಂತ್ರ ಕೈಕೊಟ್ಟಿತು.
* ಚಾಮರಾಜನಗರದ ದೊಡ್ಡಾಣೆ ಗ್ರಾಮದಲ್ಲಿ ಮೂಲಸೌಕರ್ಯವಿಲ್ಲದ ಕಾರಣ ಮತದಾನವನ್ನು ಗ್ರಾಮಸ್ಥರು ಬಹಿಷ್ಕಾರ ಮಾಡಿದ ಘಟನೆ ನಡೆದಿದೆ. ದೊಡ್ಡಾಣೆಯ ಮತಗಟ್ಟೆ 148ರಲ್ಲಿ ಈ ಘಟನೆ ನಡೆದಿದ್ದು, ಅಲ್ಲಿ ಒಟ್ಟು 461 ಮತದಾರರಿದ್ದಾರೆ. ಚುನಾವಣಾಧಿಕಾರಿ ಮತದಾರರಿಗೆ ಮತಚಲಾಯಿಸುವಂತೆ ಯತ್ನಿಸಿದರಾದರೂ ಯಾವುದೇ ಫಲ ನೀಡಲಿಲ್ಲ.
* ಬಳ್ಳಾರಿಯಲ್ಲಿ ಚಿತ್ರೀಕರಣಕ್ಕೆ ಅವಕಾಶ ನೀಡದಿದ್ದರಿಂದ ಮಾಧ್ಯಮದವರು ಮತ್ತು ಚುನಾವಣಾ ಸಿಬ್ಬಂದಿ ನಡುವೆ ಮಾತಿನಚಕಮಕಿ ನಡೆಯಿತು. ಬಳ್ಳಾರಿಯ ದೇವಿನಗರ ಮತಗಟ್ಟೆಗೆ ಶ್ರೀರಾಮುಲು ಬರುತ್ತಿದ್ದಂತೆ ಮಾಧ್ಯಮದವರು ವಿಡಿಯೋದಿಂದ ಚಿತ್ರೀಕರಿಸಲು ಪ್ರಯತ್ನಿಸಿದಾಗ ಚುನಾವಣಾಧಿಕಾರಿಗಳು ಚಿತ್ರೀಕರಣಕ್ಕೆ ಅವಕಾಶ ನೀಡಲಿಲ್ಲ.ಇದರಿಂದ ಮಾಧ್ಯಮ ಮತ್ತು ಚುನಾವಣಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪೊಲೀಸರು ಮಾಧ್ಯಮದವರ ಮೇಲೆ ಹಲ್ಲೆ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಆಗ ಅಧಿಕಾರಿಗಳು ಬಾಗಿಲು ಹಾಕಿಕೊಂಡು ಮತದಾನ ನಡೆಸಿದರು.
ಇನ್ನಷ್ಟು ಸುದ್ದಿಗಳಿಗೆ ಮುಂದಿನ ಪುಟ ನೋಡಿ

