ಬಂಟ್ವಾಳ, ಆ. 31: ಅಂತರ್ಜಾಲದ ಮೂಲಕ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಬಿ.ಸಿ.ರೋಡ್ ನಿವಾಸಿ ಭುವಿತ್ ಶೆಟ್ಟಿ (25) ಅವರನ್ನು ಬಂಟ್ವಾಳ ನಗರ ಪೊಲೀಸರು ಬಂಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಹಿಂದುತ್ವವನ್ನು ಹೀಯಾಳಿಸಿದ ಡಾ| ಕಲಬುರ್ಗೆ ಆಗಿರುವ ಗತಿ ಮುಂದಕ್ಕೆ ಕೆ.ಎಸ್. ಭಗವಾನ್ ಅವರಿಗೆ ಎಂಬ ಎಚ್ಚರಿಕೆಯ ಸಂದೇಶವನ್ನು ಅಂತರ್ಜಾಲ ವಾಟ್ಸಪ್ ಮತ್ತು ಟ್ವಿಟರ್ನಲ್ಲಿ ಹರಿಯಬಿಟ್ಟಿದ್ದು ಜಿಲ್ಲಾ ಪೊಲೀಸರಿಗೆ ನೀಡಿದ ಮಾಹಿತಿಯಂತೆ ಪೊಲೀಸರು ಸ್ವಯಂ ಪ್ರೇರಿತರಾಗಿ ಜೀವ ಬೆದರಿಕೆ ಮತ್ತು ದೊಂಬಿ ಪ್ರಚೋದನೆ ಪ್ರಕರಣ ದಾಖಲಿಸಿದ್ದರು.
