ಸುನ್ನಿ ಸ್ಟೂಡೆಂಟ್ ಫೆಡರೇಶನ್(ಎಸ್ಎಸ್ಎಫ್) ಮೂಡಬಿದ್ರೆ ವಿಭಾಗ ಹಾಗೂ ಸುನ್ನಿ ಜಂಯಿಯ್ಯತುಲ್ ಮುಹಲ್ಲಿಮೀನ್ ಕೈಕಂಬ ವ್ಯಾಪ್ತಿ ಇದರ ಜಂಟಿ ಆಶ್ರಯದಲ್ಲಿ ಜಾಮಿಯಾ ಸಅದಿಯಾ ಅರಬಿಯಾ ಇದರ ಪ್ರಚಾರಾರ್ಥ ಬೃಹ್ತ ಅಬ್ದುರ್ರಸೂಲ್ ಜಲ್ಸ ಕಾರ್ಯಕ್ರಮ ನಾಳೆ ಸಂಜೆ 4 ಗಂಟೆಗೆ ಸರಿಯಾಗಿ ಕೈಕಂಬ ಜಂಕ್ಷನ್ನಲ್ಲಿ ನಡೆಯಲಿದೆ.
ಕಾರ್ಯಕ್ರಮದ ದುವಾ ನೇತೃತ್ವವನ್ನು ಸಯ್ಯಿದ್ ಜಹಪರ್ ಸ್ವಾದಿಕ್ ತಂಙಲ್ ಕುಂಬೋಳ್ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಬಹು ಯು.ಕೆ ಯೂಸುಫ್ ಸಅದಿ ಕಂದಾವರ, ಉದ್ಘಾಟನೆಯನ್ನು ಯು.ಟಿ ಖಾದರ್, ಮುಖ್ಯ ಭಾಷಣವನ್ನು ಬಹು ಕೆ.ಸಿ ರೋಡ್ ಹುಸೈನ್ ಸಅದಿ, ಪ್ರಾಸ್ತಾವಿಕ ಭಾಷಣವನ್ನು ಬಹು ಬಶೀರ್ ಮದನಿ ಅಲ್ಕಾಮಿಲ್ ಕೂಳೂರು ನೆರವೇರಿಸಲಿದ್ದಾರೆ.
