ಸುದ್ದಿ9 ಕೈಕಂಬ : ಶ್ರೀ ಮುಖ್ಯಪ್ರಾಣ ದೇವಸ್ಥಾನ ಪೊನ್ನಂಗಿಲ ಅಡ್ಡೂರು ಶ್ರೀ ಮುಖ್ಯಪ್ರಾಣ ದೇವರ ಸನ್ನಿಧಾನದಲ್ಲಿ ಮೇ2ಬೆಳಗ್ಗೆ ಶ್ರೀ ಕ್ಷೇತ್ರದ ತಂತ್ರಿಗಳಾದ ಕೋಡಿಮಜಲು ವೇದಮೂರ್ತಿ ಶ್ರೀ ಅನಂತ ಪದ್ಮನಾಭ ಉಪಾಧ್ಯಾಯರ ಉಪಸ್ಥಿತಿಯಲ್ಲಿ ಶ್ರೀ ದೇವರಿಗೆ ಪವಮಾನ ಅಭಿಷೇಕ ಹಾಗೂ ಸಂಜೆ ನವಕ ಕಲಾಭಿಷೇಕ ಜರುಗಿತು. ರಾತ್ರಿ 8ಕ್ಕೆ ಅಮ್ಮ ಶ್ರೀ ಧೂಮವತಿ ಬಂಟ ದೈವಗಳ ನೇಮೋತ್ಸವ ನಡೆಯಲಿದೆ.
