ಸುದ್ದಿ9 ಮಂಗಳೂರು; [ಮಾ26 ]ನಮ್ಮ ಭಾಷೆಯನ್ನು ಮರೆಯದೆ ಎಲ್ಲಾ ಭಾಷೆಯನ್ನು ಗೌರವಿಸುವುದು ನಿಜವಾದ ಭಾಷಾ ಪ್ರೇಮ ಎಂದು ಮೂಡಬಿದ್ರೆ ಜೈನ ಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀತರ್ಿ ಸ್ವಾಮಿಗಳು ಅಭಿಪ್ರಾಯಪಟ್ಟರು.
ಬೆಸೆಂಟ್ ಮಹಿಳಾ ಕಾಲೇಜಿನಲ್ಲಿ ಇತಿಹಾಸ ವಿಭಾಗದ ವತಿಯಿಂದ ಬುಧವಾರ ನಡೆದ ಪ್ರಾಕೃತ ಪ್ರಶಸ್ತಿ ಪತ್ರ ವಿತರಣಾ ಸಮಾರಂಭದಲ್ಲಿ ಆಶರ್ೀವಚನ ನೀಡಿ ಮಾತನಾಡಿದರು.

prakrtha
prakrtha

prakrtha2 copy

prakratha
ಜಗತ್ತಿನ ಭಾಷೆಗಳ ಮೂಲ ಪ್ರಾಕೃತ ಭಾಷೆ. ಧರ್ಮವನ್ನು ತಿಳಿಯಪಡಿಸಲು ಸರಳ ಭಾಷೆ ಬೇಕು ಎನ್ನುವ ಕಾರಣಕ್ಕಾಗಿ ಮಹಾವೀರ ಪ್ರಾಕೃತ ಭಾಷೆಯನ್ನು ಬಳಸಿದರು. ತಕ್ಷಶಿಲದಿಂದ ಹಿಡಿದು ಮಥುರಾ ತನಕ ಪ್ರಾಕೃತ ಭಾಷೆ ಬಳಕೆಯಲ್ಲಿತ್ತು. ಪಶ್ಚಿಮದ ಮುಸ್ಲಿಮರು ಕುರಾನ್ ಧರ್ಮಪ್ರಚಾರಕ್ಕೆ, ಸಿಖ್ಖರು ಗ್ರಂಥಸಾಹಿಯ ಪ್ರಚಾರಕ್ಕೆ ಪ್ರಾಕೃತ ಭಾಷೆಯನ್ನು ಬಳಸಿದ್ದರು. ಕತೆ, ಕವನ, ಸಾಹಿತ್ಯದಲ್ಲೂ ಬಳಸಿದ ಉಲ್ಲೇಖಗಳಿವೆ. ಕೊಂಕಣಿ ಭಾಷೆಯ ಮೂಲ ಪ್ರಾಕೃತ. ಬ್ರಾಹ್ಮಿ ಲಿಪಿಯ ಭಾಷೆ ಪ್ರಾಕೃತ ಭಾಷೆ. ಬಾಂಗ್ಲಾ, ಅಸ್ಸಾಮ್, ಗುಜರಾತ್, ರಾಜಸ್ತಾನಗಳಲ್ಲಿಯೂ ಪ್ರಾಕೃತ ಭಾಷೆಯನ್ನು ಬಳಿಸಿದ ಉಲ್ಲೇಖಗಳಿವೆ ಎಂದರು.
ರಾಷ್ಟ್ರೀಯ ಪ್ರಾಕೃತ ಕೇಂದ್ರ ಸ್ಥಾಪಿಸಿ ಭಾಷೆಯ ಉಳಿವಿಗೆ ಪ್ರಯತ್ನಿಸುತ್ತಿದ್ದೇವೆ. ಪ್ರಾಕೃತ ಭಾಷೆ ಸಾಹಿತ್ಯ, ಸಂಸ್ಕೃತಿ ಕುರಿತು ಅರಿತುಕೊಳ್ಳಲು ಶ್ರವಣಬೆಳಗೊಳದಲ್ಲಿ ಕೋಸರ್್ ಇದೆ. ಭಾರತೀಯ ಪ್ರಾಚೀನ ಭಾಷೆಗಳಲ್ಲಿ ಒಂದಾದ ಪ್ರಾಕೃತ ಭಾಷೆಯಲ್ಲಿ ಅಭಿರುಚಿ ಬೆಳೆಸಿ ಸಂಶೋಧನಾ ವಲಯದಲ್ಲಿ ಉದ್ಯೋಗದ ವಿಫುಲ ಅವಕಾಶಗಳಿವೆ.ಆಧುನಿಕ ಶಿಕ್ಷಣ ವ್ಯವಸ್ಥೆ ಬಂದರೂ ನಾವು ನಮ್ಮ ತನವನ್ನು ಮರೆಯಬಾರದು. ವ್ಯವಹಾರಕ್ಕಾಗಿ ಇಂಗ್ಲೀಷ್, ಕನ್ನಡ ತುಳು ನಮ್ಮ ತನದ ಉಳಿಕೆಗೆ ಕಲಿಯಿರಿ. ಬೆಲೆ ಕಟ್ಟಲಾಗದ ಭಾಷೆ ಪ್ರಾಕೃತ ಭಾಷೆ. ಪ್ರಾಕೃತದ ಮೂಲಕ ಪ್ರಕೃತಿಯ ಭಾಷೆಯನ್ನು ಅರಿತುಕೊಳ್ಳುವ ಪ್ರಯತ್ನ ನಡೆಸಿ ಎಂದರು.
ಡಬ್ಲ್ಯ.ಎನ್,ಇ.ಎಸ್., ಅಧ್ಯಕ್ಷ ಕುಡ್ಪಿ ಜಗದೀಶ ಶೆಣೈ ಅಧ್ಯಕ್ಷತೆ ವಹಿಸಿದ್ದರು.
ಬೆಸೆಂಟ್ ಮಹಿಳಾ ಕಾಲೇಜಿನ ಸಂಚಾಲಕ ಮೋಹನ್ ನಾಯಕ್, ಇತಿಹಾಸ ವಿಭಾಗ ಮುಖ್ಯಸ್ಥ ಪ್ರೊ.ಗಣೇಶ ಪೈ.ಎನ್., ಉಪಸ್ಥಿತರಿದ್ದರು.
ಕಾಲೇಜಿನ ಪ್ರಿನ್ಸಿಪಾಲ್ ಪ್ರೊ.ಪುಪ್ಪಲತಾ ಬಿ.ಕೆ., ಸ್ವಾಗತಿಸಿದರು.

By Suddi9

Leave a Reply

Your email address will not be published. Required fields are marked *