ಬಜಪೆ: ಕಟೀಲು ಶ್ರೀ ದುರ್ಗಾ ಪರಮೇಶ್ವರೀ ದೇವಳದಲ್ಲಿ ಶನಿವಾರ ಸಂಸದ- ಮಾಜಿ ಮುಖ್ಯಮಂತ್ರಿ ವೀರಪ್ಪ ಮ್ಯೊಲಿ -ಮಾಲತಿ ಮ್ಯೊಲಿ ದಂಪತಿಯ ಸೇವೆಯ ಪ್ರಯುಕ್ತ “ಚಿನ್ನದ ರಥೋತ್ಸವ” ಸಂಭ್ರಮದಿಂದ ಮ್ಯೊಲಿ ದಂಪತಿ ಉತ್ಸಹದಿಂದ ಮೂರು ಸುತ್ತು ತಾವೂ ಚಿನ್ನದ ರಥ ರಥವೆಳೆದು ಸಂಭ್ರಮಿಸಿದರು.


ಅನುವಂಶಿಕ ಅರ್ಚಕ ಅನಂತಪದ್ಮನಾಭ ಅಸ್ರಣ್ಣ ಪ್ರಸಾದ ನೀಡಿ ಗೌರವಿಸಿದರು. ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣ ,ಅರ್ಚಕರಾದ ಲಕ್ಷ್ಮೀನಾರಾಯಣ ಅಸ್ರಣ್ಣ ,ವೆಂಕಟರಮಣ ಅಸ್ರಣ್ಣ, ಹರಿನಾರಾಯಣ ಅಸ್ರಣ್ಣ ಉಪಸ್ಥಿತರಿದ್ದರು.
