ಉಳ್ಳಾಲ: ಮಹಾ ಶಿವರಾತ್ರಿಯ ಅಂಗವಾಗಿ ಇತಿಹಾಸ ಪ್ರಸಿದ್ಧ ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಂಗಳವಾರ ನಡೆಯಿತು. ಶ್ರೀ ಕ್ಷೇತ್ರದಲ್ಲಿ ಉತ್ಸವದ ಅಂಗವಾಗಿ ಏಕಾಹ ಭಜನಾ ಕಾರ್ಯಕ್ರಮ, ವಿಶೇಷ ಪೂಜೆ, ಬಲಿ ಪೂಜೆ ನಡೆಯಿತು. ಸಾವಿರಾರು ಭಕ್ತಾಧಿಗಳು ಭಾಗವಹಿಸಿದ್ದರು.

`ಮಹಾಶಿವರಾತ್ರಿ ಪ್ರಯುಕ್ತ ಸೂರ್ಯೋದಯದಿಂದ ನಾಳೆ ಬೆಳಿಗ್ಗೆ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ ಏಕಾಹ ಭಜನೆ ನಡೆಯುತ್ತದೆ. ಶಿವರಾತ್ರಿ ವಿಶೇಷ ಎಂದರೆ ಬಿಲ್ವಪತ್ರೆ ಮರದ ಎಲೆಯನ್ನು ಶಿವನಿಗೆ ಭಕ್ತರು ಸಂಪ್ರದಾಯದಂತೆ ಸಮಾಪನೆ ಮಾಡಿ ಪೂಜೆ ನೆರವೇರಿಸುತ್ತಾರೆ.’ : ಗೋಪಾಲ್ ಕುತ್ತಾರ್ , ಆಡಳಿತ ಮೊಕ್ತೇಸರ


