ಬಂಟ್ವಾಳ:ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ‘ಮೇಕ್ ಇನ್ ಇಂಡಿಯಾ’ ಯೋಜನೆಗೆ ಸಂಬಂಧಿಸಿದಂತೆ ಜಪಾನಿನ ಎಚ್ಐಡಿಎ ಮತ್ತು ಸಿಐಐ( ಚೇಂಬರ್ ಆಫ್ ಇಂಡಿಯನ್ ಇಂಡಸ್ಟ್ರೀಸ್) ಜಂಟಿ ಸಹಭಾಗಿತ್ವದಲ್ಲಿ ನಡೆಯುವ 20ದಿನಗಳ ವಿಶೇಷ ತರಬೇತಿ (ಐಎನ್ಪಿಎಂ) ಶಿಬಿರಕ್ಕೆ ಬಂಟ್ವಾಳ ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಆರಂಬೋಡಿ ನಿವಾಸಿ ಬಿ.ರಾಧಾಕೃಷ್ಣ ಭಟ್ ಆಯ್ಕೆಯಾಗಿದ್ದಾರೆ.

ಬೆಂಗಳೂರಿನ ಸೋನಾ ಗ್ರೂಪ್ ಆಫ್ ಕಂಪೆನೀಸ್ ಸಂಸ್ಥೆ ಉದ್ಯೋಗಿಯಾಗಿರುವ ಇವರು ಬಂಟ್ವಾಳ ಎಸ್ವಿಎಸ್ ಕಾಲೇಜಿನ ಹಳೆ ವಿದ್ಯಾಥರ್ಿಯಾಗಿದ್ದಾರೆ.
ಭಾರತದಿಂದ ತರಬೇತಿಗೆ ಆಯ್ಕೆಯಾಗಿರುವ ಒಟ್ಟು 17 ಮಂದಿ ತಂಡದಲ್ಲಿ ಬಿ.ರಾಧಾಕೃಷ್ಣ ಭಟ್ ಕೂಡಾ ಒಬ್ಬರು ಎಂಬುದು ತಾಲ್ಲೂಕಿಗೆ ಹೆಮ್ಮೆ ತಂದಿದೆ ಎಂದು ಪ್ರಕಟಣೆ ತಿಳಿಸಿದೆ
