ಸುದ್ದಿ9 ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಹಿಂದೂ ಯುವ ತರುಣರಿಂದ ಅಂಡರ್ ಆರ್ಮ್ ಶೈಲಿಯ ಸೂಪರ್ ಸಿಕ್ಷ್ ಕ್ರಿಕೆಟ್ ಪಂದ್ಯಾಟವನ್ನು ಜ.18 ರಂದು ಭಾನುವಾರ ಉಳಿಪಾಡಿಗುತ್ತು ರಾಜೇಶ್ ನಾೈಕ್ ಅವರ ಅನುಪಸ್ಥಿತಿಯಲ್ಲಿ ಬಜರಂಗದಳದ ಜಿಲ್ಲಾ ಸಂಚಾಲಕ ಭುಜಂಗ ಕುಲಾಲ್ ಉದ್ಘಾಟಿಸಿದರು. 

ಕ್ರಿಕೆಟ್ ಪಂದ್ಯಾಟವು ಅಮ್ಮುಂಜೆ ಕ್ರೀಡಾಂಗಣದಲ್ಲಿ ಮಾನ್ಯ ಕೊಡ್ಮಾಣ್ ಕಾಂತಪ್ಪ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಜರಗಿತು .
ವಿಶ್ವ ಹಿಂದೂ ಪರಿಷತ್ ಬಂಟ್ವಾಳ ಪ್ರಖಂಡ ಕಾರ್ಯದರ್ಶಿ ಸುರೇಶ್ ಸಾಲ್ಯಾನ್ ಬೆಂಜನಪದವು ಬಜ್ಪೆ ಬಜರಂಗದಳದ ಸಂಚಾಲಕ ಸುಶಾಂತ್ ಕೋಟ್ಯಾನ್, ಪೊಳಲಿ ಹಿಂದೂ ಜಾಗರಣಾ ವೇದಿಕೆ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಪೊಳಲಿ, ಅಮ್ಮುಂಜೆ ಬಿಜೆಪಿ ಅಧ್ಯಕ್ಷ ಜನಾರ್ಧನ ಪೂಜಾರಿ ಬಾರಿಂಜೆ, ಮನೋಜು ಇವರು ಬಾಗವಹಿಸಿದ್ದರು ಪ್ರಮುಖರಾದ ರವಿ ಪೂಜಾರಿ ಕಣಿಯೂರು, ಪ್ರಶಾಂತ್ ಕೊಟ್ಟಾರಿ, ಪಂ ಅಧ್ಯಕ್ಷೆ ಪ್ರೇಮ ಚೌಟ ಜಯಂತ ಪೂಜಾರಿ, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು. ವಾಮನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಮೂರು ಓವರ್ನ ಪಂದ್ಯಾಟದಲ್ಲಿ ಸುಮಾರು 35 ತಂಡಗಳು ಭಾಗವಹಿಸಿದವು .










