ಕೈಕಂಬ: ಪ್ರಖ್ಯಾತ ನಾಟಿ ವೈದ್ಯ ಶೀನ ಪೂಜಾರಿ ಕೊಳತ್ತಮಜಲು ಅವರನ್ನು ಚಾಮುಂಡೇಶ್ವರಿ ಮತ್ತು ಕಲ್ಲುರ್ಟಿ
ದೈವಾರಾಧನಾ ಸಮಿತಿ ವತಿಯಿಂದ ಸಾಣೂರುಪದವಿನಲ್ಲಿ ವಾಮಯ್ಯ ಪೂಜಾರಿ ನೇತ್ರತ್ವದಲ್ಲಿ ಸನ್ಮಾನಿಸಲಾಯಿತು.

ಹಾವು ಕಚ್ಚಿದ ವಿಷವನ್ನು ಕಲ್ಲಿನ ಮೂಲಕ ತೆಗೆಯುತ್ತಿದ್ದರು. ಇವರಿಂದಾಗಿ ಹಲವಾರು ಮಂದಿಯ ಜೀವ ಉಳಿದ ಘಟನೆಗಳಿವೆ. ಯಾವುದೇ ಫಲಾಪೇಕ್ಷೆ ಇಲ್ಲದೆ, ಉಚಿತವಾಗಿ ಔಷಧಿ ನೀಡುತ್ತಿದ್ದರಿಂದ ಬಹಳ ಜನಮೆಚ್ಚಿಗೆ ಗಳಿಸಿದ್ದಾರೆ. ಕನ್ನಡಿಹಾವು, ನಾಗರ ಹಾವು ಹೀಗೆ ಹಲವಾರು ವಿಷಸರ್ಪಗಳು ಕಚ್ಚಿದರೆ ಔಷಧಿ ನೀಡುತ್ತಿದ್ದಾರೆ. ಇವರ ಸೇವೆಯನ್ನು ಮನಗಂಡು ಸಂಘಟನೆ ಈ ರೀತಿ ಸನ್ಮಾನಿಸಲಾಗಿದೆ.
ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕಚೈತನ್ಯಾನಂದ ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಪಚಿನಡ್ಕ , ಗಣೇಶ್ ಪೂಜಾರಿ , ಜನಾರ್ಧನ ಅಮ್ಮುಂಜೆ ಮತ್ತಿತರರು ಉಪಸ್ಥಿತರಿದ್ದರು.
ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ “ವೀರತರಣಿ ಸೇನ” ಎಂಬ ಯಕ್ಷಗಾನ ತಾಳಮದ್ದಳೆ ಈ ಮೊದಲು ನಾನಾ ಭಜನಾ ಮಂಡಳಿಗಳಿಂದ ಭಜನಾ ಸಂಕೀರ್ತನೆ ಹಾಗೂ ನಂತರ ಅನ್ನ ಸಂತರ್ಪನೆ ನಡೆಯಿತು.
ರಾತ್ರಿ ಚಾಮುಂಡೇಶ್ವರಿ ಮತ್ತು ಕಲ್ಲುರ್ಟಿ ದೈವಗಳ ಗಗ್ಗರ ಸೇವೆ ಜರಗಿತು.















