ಸುದ್ದಿ9 ಕೈಕಂಬ: ಅನುದಾನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವವು ಡಿ.20 ರಂದು ಬಡಗಬೆಳ್ಳೂರು ಶಾಲಾ ಸಭಾಂಗಣದಲ್ಲಿ ಜರಗಿತು.
ವಾರ್ಷಿಕೋತ್ಸವದ ಸಂದರ್ಭದಲ್ಲಿ ಸುಮಾರು 35 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತಿ ಹೊಂದಿದ ಮುಖ್ಯ ಶಿಕ್ಷಕಿಯರಾದ ಕಮಾಲಾಕ್ಷಿ ಹಾಗೂ ನಿವ್ರತಿ ಹೊಂದಲಿರುವ ಸಹಶಿಕ್ಷಕಿ ಎವ್ಜಿನ್ ಕುವೆಲ್ಹೊ ಅಭಿವಂದಿಸಿ ಸಮ್ಮಾನಿಸಲಾಯಿತು.
ಬೆಳಗ್ಗೆ 9.30ಕ್ಕೆ ಧ್ವಜಾರೋಹನವನ್ನು ತಾ ಪಂ ಅಧ್ಯಕ್ಷೆ ಗುಣವತಿ ನೆರವೆರಿಸಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಶೆಷಶಯನ ಕಾರಿಂಜ ವಹಿಸಿದ್ದರು. ಮಂಗಳೂರು ಮ್ಯಾಪ್ಸ್ ಕಾಲೇಜು ಪ್ರಾಧ್ಯಾಪಕ ಡಾ.ಎಂ ದೇಜಪ್ಪ ದಲ್ಲೋಡಿಮುಖ್ಯ ಅತಿಥಿಯ ಭಾಷಣ ಮಾಡಿದರು. ತಲಪಾಡಿ ಶಾರದಾ ವಿದ್ಯಾನಿಕೇತನ ಪ್ರಾಂಶುಪಾಲೆ ಲತಾ ಎಸ್ ರೈ ಅವರುಶಿಕ್ಷಕಿಯರನ್ನಅಭಿನಂದಿಸಿಮಾತನಾಡಿದರು.
ಶಾಲಾ ಸಂಚಾಲಕ ನರೇಂದ್ರನಾಥ ಭಂಡಾರಿ ಸ್ವಾಗತಿಸಿ ಶಾಲಾ ಮುಖ್ಯ ಶಿಕ್ಷಕ ಸಂಕಪ್ಪಶೆಟ್ಟಿ ಧನ್ಯ ವಾದವಿತ್ತರು ಶಿಕ್ಷಕಿ ಲಿಲ್ಲಿ ಡಿ” ಸೋಜಾ ನಿರೂಪಿಸಿದರು.
ಶಾಲಾ ಮಕ್ಕಳಿಂದ ವಿವಿಧ ವೈವಿಧ್ಯ ನ್ರತ್ಯ ಹಾಗೂ ಭಾಸ್ಕರ ಕೋಟ್ಯಾನ್ ವಿರಚಿತ “ಲಂಚ ದೆತೊಂಡ ಎಂಚ” ತುಳು ಹಾಸ್ಯಮಯ ನಾಟಕ ಹಾಗೂ ದೇವ್ದಾಸ್ ಅರ್ಕುಳ ನಿರ್ದೇಶನದಲ್ಲಿ ಡಿ ಮಾಧವ ಬಂಗೇರಾ ಕೊಳತ್ತಮಜಲು ಸಂಯೋಜನೆಯಲ್ಲಿ “ವೀರ ಬಬ್ರುವಾಹನ” ಎಂಬ ಪೌರಾಣಿಕ ಯಕ್ಷಗಾನವನ್ನು ಶಾಲಾ ಮಕ್ಕಳು ನಡೆಸಿಕೊಟ್ಟರು.















