ಬಂಟ್ವಾಳ: ಕರ್ನಾಟಕ ಸರಕಾರದ 2025-26ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕಾರಕ್ಕೆ ಬಂಟ್ವಾಳ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ ಟೇಬಲ್ ಇರ್ಷಾದ್ ಪಡಂಗಡಿ ಅವರು ಆಯ್ಕೆಯಾಗಿದ್ದಾರ

ಬೆಳ್ತಂಗಡಿ ತಾ.ನ ಪಡಂಗಡಿ ನಿವಾಸಿಯಾದ ಇರ್ಷಾದ್ 2008 ರಲ್ಲಿ ಪೊಲೀಸ್ ಇಲಾಖೆಗೆ ನಿಯುಕ್ತರಾಗಿದ್ದರು.
ಮಂಗಳೂರು ವಿಶೇಷ ಘಟಕ,ಉಪ್ಪಿನಂಗಡಿ ಇದೀಗ ಬಂಟ್ವಾಳ ನಗರ ಠಾಣೆಯಲ್ಲಿ ಗುಪ್ತವಾರ್ತೆ ವಿಭಾಗದಲ್ಲಿ ಹಲವು ಸಮಯದಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.ವಿವಿಧ ಪ್ರಕರಣಗಳನ್ನು ಪತ್ತೆಹಚ್ಚುವಲ್ಲಿ ಮಾಡಿರುವ ಸಾಧನೆಗಾಗಿ ಇವರಿಗೆ ಮುಖ್ಯಮಂತ್ರಿ ಪದಕ ಲಭಿಸಿದೆಯೆಂದು ತಿಳಿದು ಬಂದಿದೆ.
