ಬಂಟ್ವಾಳ: ಕೇಂದ್ರ ಸರ್ಕಾರದ ಜಲ್ ಜೀವನ್ ಮಿಷನ್ ಯೋಜನೆಯಡಿ ಕಳ್ಳಿಗೆ ಗ್ರಾಮಕ್ಕೆ 24X7 ಕುಡಿಯುವ ನೀರು ಪೂರೈಕೆ ಉದ್ದೇಶದಿಂದ ಮಂಗಳವಾರ ಕಳ್ಳಿಗೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ಜಲ್ ಅರ್ಪಣ್ ದಿವಸ್ ಕಾರ್ಯಕ್ರಮವನ್ನು ಬಂಟ್ವಾಳ ಶಾಸಕರಾದ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಜೀವಜಲ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ. ಸುಮಾರು 1.80 ಕೋಟಿ ರೂ. ಅನುದಾನದಲ್ಲಿ ಕಳ್ಳಿಗೆ ಗ್ರಾಮದಲ್ಲಿ ಈ ಯೋಜನೆಯನ್ನು ಯಶಸ್ವಿಯಾಗಿ ಪೂರೈಸಲಾಗಿದೆ ಎಂದರು.
ನೀರನ್ನು ಮಿತವಾಗಿ ಬಳಸೋಣ ಎಂದು ಕಿವಿಮಾತು ಹೇಳಿದ ಅವರು ಗ್ರಾಮೀಣ ಭಾಗದ ಪ್ರತೀ ಮನೆಮನೆಗೂ ನಿರಂತರ ಕುಡಿಯುವ ನೀರು ಪೂರೈಸುವ ಉದ್ದೇಶವನ್ನಿರಿಸಿಕೊಂಡು ಈ ಯೋಜನೆಯನ್ನು ಕಾರ್ಯಗತ ಗೊಳಿಸಲಾಗಿದೆ ಎಂದರು

ಬಂಟ್ವಾಳ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿ ಸಚಿನ್ ಕುಮಾರ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನಟೇಶ್, ಕಿರಿಯ ಅಭಿಯಂತರರಾದ ಜಗದೀಶ್, ಕಳ್ಳಿಗೆ ಗ್ರಾಪಂ ಮಾಜಿ ಅಧ್ಯಕ್ಷೆ ಯಶೋಧಾ ಜಾರಂದಗುಡ್ಡೆ, ಮಾಜಿ ಉಪಾಧ್ಯಕ್ಷ ದಾಮೋದರ ನೆತ್ತರಕೆರೆ, ಸದಸ್ಯರಾದ ಮನೋಜ್ ವಳವೂರು, ರೇಶ್ಮಾ ಬೆಂಜನಪದವು, ಪ್ರಮುಖರಾದ ಸತೀಶ್ ಮಾಡಂಗೆ, ಪುಷ್ಪಾ ಬಂಜನ್ ದರಿಬಾಗಿಲು, ಓಮಯ್ಯ ಜೆ ಕೋಟ್ಯಾನ್ ಕನಪಾಡಿ, ಸಂಜೀವ ಬೆದ್ರಾಡಿ, ಸಂತೋಷ್ ಬ್ರಹ್ಮರಕೂಟ್ಲು, ಮಾಧವ ಬ್ರಹ್ಮರಕೂಟ್ಲು, ಯೋಗೀಶ್ ದರಿಬಾಗಿಲು, ಗಿರೀಶ್ ಚಂದ್ರಿಗೆ, ದಿನಕರ ಚಂದ್ರಿಗೆ ಮತ್ತಿತರರಿದ್ದರು.
ಕಳ್ಳಿಗೆ ಗ್ರಾಪಂ ಅಧ್ಯಕ್ಷ ಪುರುಷೋತ್ತಮ ಕೊಟ್ಟಾರಿ ಮಾಡಂಗೆ ಸ್ವಾಗತಿಸಿದರು. ಪಿಡಿಓ ಚಂದ್ರಾವತಿ ವಂದಿಸಿದರು.
