ಗುರುಪುರ `ಬಂಡಿ’ ಜಾತ್ರೆಯ
ಪೂರ್ವಭಾವಿ ಸಭೆ
ಕೈಕಂಬ : ಗುರುಪುರ ಮೂಳೂರು ಶ್ರೀ ಮುಂಡಿತ್ತಾಯ(ವೈದ್ಯನಾಥ) ದೈವಸ್ಥಾನದಲ್ಲಿ ಫೆ. ೧೩ರಿಂದ ೧೫ರವರೆಗೆ ನಡೆಯಲಿರುವ `ಬಂಡಿ’ ಜಾತ್ರೆಯ ಪ್ರಯುಕ್ತ ಪ್ರಧಾನ ಗಡಿಕಾರ ದೋಣಿಂಜೆಗುತ್ತು ಪ್ರಮೋದ್ ಕುಮಾರ್ ರೈ ಅವರ ನೇತೃತ್ವದಲ್ಲಿ ಫೆ. ೨ರಂದು ದೈವಸ್ಥಾನದಲ್ಲಿ ಪೂರ್ವಭಾವಿ ಸಭೆ ನಡೆಯಿತು.

ಸಭೆಯಲ್ಲಿ ಅನ್ನದಾನ ವ್ಯವಸ್ಥೆ, ಸಂತೆ-ವ್ಯಾಪಾರ, ಧಾರ್ಮಿಕ ವಿಧಿ-ವಿಧಾನಗಳ ಕುರಿತು ಸಭಿಕರು ಸಲಹೆ-ಸೂಚನೆ ನೀಡಿದರು. ಸಭೆಯಲ್ಲಿ ಗುತ್ತುಗಳ ಯಜಮಾನರು, ದೈವಸ್ಥಾನದ ತಂತ್ರಿ ಜಿ. ಟಿ. ವಾಸುದೇವ ಭಟ್, ದೈವದ ಪಾತ್ರಿಗಳು, ಸಂಘ-ಸAಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು, ಊರಿನ ನಾಗರಿಕರು ಉಪಸ್ಥಿತರಿದ್ದರು.