Published On: Mon, Jan 27th, 2025

“ಭಾರತ ಮಾತಾ ಪೂಜನ” ಕಾರ್ಯಕ್ರಮ, ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹಿ.ಜಾ.ವೇ.ಮುಖಂಡ ರಾಧಾಕೃಷ್ಣ ಅಡ್ಯಂತಾಯ

ಬಂಟ್ವಾಳ:ತಾಲೂಕಿನ ನರಿಕೊಂಬು ಗ್ರಾಮದ ಶೇಡಿಗುರಿಯಲ್ಲಿ ನಡೆದ ” ಭಾರತ ಮಾತಾ ಪೂಜನ” ಕಾರ್ಯಕ್ರಮ ಭಾನುವಾರ (ಜ.26) ನಡೆಯಿತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಹಿ.ಜಾ.ವೇ.ಮುಖಂಡ ,ನಿವೃತ್ತ ಶಿಕ್ಷಕ ರಾಧಾಕೃಷ್ಣ ಅಡ್ಯಂತಾಯ ಭಾರತ ಜ್ಞಾನ,ವಿಜ್ಞಾನ ಮತ್ತು ಸಂಪತ್ತಿನ ಆಗರವಾಗಿದೆ. ತ್ಯಾಗ, ಸೇವೆ,ಪಾವಿತ್ರ್ಯತೆ,ಸಹನೆ, ಕರುಣೆ ಎಂಬ ಪಂಚಮೌಲ್ಯಗಳ ಸನಾತನ ಮಾತೃ ಪ್ರಧಾನ ಹಿಂದೂ ಸಂಸ್ಕೃತಿಯಿಂದ ವಿಶ್ವವನ್ನೇ ಬೆಳಗಿಸಿದ ವಿಶ್ವ ಮಾತೆಯ ಆರಾಧನೆಯೇ ಭಾರತ ಮಾತಾ ಪೂಜನ ಎಂದು ಅವರು ಹೇಳಿದರು.

ನಮ್ಮ ಮಾತೃಭೂಮಿ, ಪಿತೃ ಭೂಮಿ, ಗುರು ಸ್ವರೂಪಿ ಮಾತ್ರವಲ್ಲ ಜಗಜ್ಜನನಿ – ಜಗದ್ಗುರು ಭಾರತವಾಗಿದೆ ಎಂದ ಅವರು ವಿಶ್ವವಿಜೇತ ಭಾರತಮಾತೆಯ ಪರಮವೈಭವಕ್ಕಾಗಿ ಬಾಳುವ ಸಂಕಲ್ಪನ್ನು ನಾವೆಲ್ಲರೂ ತೊಡಬೇಕಾಗಿದೆ ಎಂದರು.ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು. ಪುರುಷೋತ್ತಮ ಸಾಲಿಯಾನ್ ಸ್ವಾಗತಿಸಿದರು, ಚೇತನ್ ಎಲಬೆ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter