Published On: Tue, Dec 10th, 2024

ದೇಶಭಕ್ತಿ ಗೀತೆಯಲ್ಲಿ ಕ್ಷಿತಿ ಹಿಮಾನಿ ಅಂಬೆಕಲ್ಲು ಪ್ರಥಮ

ಬಂಟ್ವಾಳ: ಪುತ್ತೂರು ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಕಿರಿಯ ವಿಭಾಗದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ ಕ್ಷಿತಿ ಹಿಮಾನಿ ಅಂಬೆಕಲ್ಲು ಪ್ರಥಮ ಸ್ಥಾನವನ್ನು ಪಡೆದಿರುತ್ತಾಳೆ. 

ಈಕೆ ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ನಾಲ್ಕನೇ ತರಗತಿಯ ವಿದ್ಯಾರ್ಥಿನಿಯಾಗಿದ್ದು,

ಕರ್ನಾಟಕ ಶಾಸ್ತ್ರೀಯ ಸಂಗೀತವನ್ನು ಗುರುಗಳಾದ ವಿದ್ವಾನ್ ಕೃಷ್ಣ ಆಚಾರ್ ಬಿ.ಸಿ.ರೋಡ್ ಮತ್ತು ವಿದುಷಿ  ರಜತಾ ಕೃಷ್ಣಾಚಾರ್ಯ ಹಾಗೂ ಭರತನಾಟ್ಯವನ್ನು ವಿದ್ವಾನ್  ಬಿ. ದೀಪಕ್ ಕುಮಾರ್ ಪುತ್ತೂರು,  ಪ್ರಸನ್ನ ಐವರ್ನಾಡು ಇವರ ಬಳಿ ಚಿತ್ರಕಲೆಯ ಅಭ್ಯಾಸವನ್ನು ಮಾಡುತ್ತಿದ್ದಾಳೆ. 

ಪ್ರಸ್ತುತ ಮೆಲ್ಕಾರ್‌ನಲ್ಲಿ ವಾಸ್ತವ್ಯ ಇರುವ ಸಿವಿಲ್ ಇಂಜಿನಿಯರ್ ಮಧುಸೂದನ್ ಅಂಬೆಕಲ್ಲು ಹಾಗೂ ಶಿಕ್ಷಕಿ ತೇಜಸ್ವಿ ಅಂಬೆಕಲ್ಲು ಅವರ ಪುತ್ರಿಯಾಗಿದ್ದಾಳೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter