Published On: Thu, Dec 5th, 2024

ಜೀವನದಲ್ಲಿ ಶಿಸ್ತು ಪಾಲನೆಯಿಂದ‌ ರೋಗ ಮುಕ್ತರಾಗಲು ಸಾಧ್ಯ: ಡಾ. ಆಶಾಲತಾ ಸುವರ್ಣ

ಬಂಟ್ವಾಳ: ಕ್ಷಯ ರೋಗಕ್ಕೆ ಭಯಪಡುವ ಅಗತ್ಯವಿಲ್ಲ,‌ಸಮಯಕ್ಕೆ ಸರಿಯಾಗಿ ಔಷಧಿ ಸೇವಿಸುವುದರ ಜೊತೆಗೆ ಪೌಷ್ಢಿಕ ಆಹಾರ ಸೇವನೆ ಹಾಗೂ‌ ಜೀವನದಲ್ಲಿ  ಶಿಸ್ತು ಕಾಪಾಡಿಕೊಳ್ಳುವುದರಿಂದ ಬೇಗ ರೋಗ ಮುಕ್ತರಾಗಲು ಸಾಧ್ಯವಿದೆ ಎಂದು ಸಂಚಯಗಿರಿ ರಾಣಿ ಅಬ್ಬಕ್ಕ ಅಧ್ಯಯನ ಕೇಂದ್ರದ ಕಾರ್ಯದರ್ಶಿ ಡಾ. ಆಶಾಲತಾ ಸುವರ್ಣ ಹೇಳಿದರು


ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಆಶ್ರಯದಲ್ಲಿ ಸೇವಾಂಜಲಿ ಸಭಾಂಗಣದಲ್ಲಿ ನಡೆದ ಕ್ಷಯ ರೋಗಿಗಳಿಗೆ ಆಹಾರ ದವಸಧಾನ್ಯ ವಿತರಣಾ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ರೋಗ ಬಂದ ಬಳಿಕ ಮತ್ತೊಬ್ಬರಿಗೆ ಹರಡದಂತೆ ಎಚ್ಚರ‌ವಹಿಸುವ ಜವಬ್ದಾರಿ ರೋಗಿಗಳಲ್ಲಿ ಇದ್ದು ಮಕ್ಕಳು, ಹಿರಿಯರ ಜೊತೆ ಹಾಗೂ  ಸಾರ್ವಜನಿಕ ಕಾರ್ಯಕ್ತಮದಲ್ಲಿ ಭಾಗವಹಿಸುವ ಸಂದರ್ಭ ಜಾಗ್ರತೆ ವಹಿಸುವಂತೆ ತಿಳಿಸಿದರು.
ದ..ಕ. ಜಿಲ್ಲಾ ಕೃಷಿ ಅಭಿವೃದ್ಧಿ ರವೀಂದ್ರ ಕಂಬಳಿ ಮಾತನಾಡಿ ಸೇವಾಂಜಲಿ ಪ್ರತಿಷ್ಠಾನ ಧಾರ್ಮಿಕ, ಸಾಮಾಜಿಕ, ಆರೋಗ್ಯ, ಶೈಕ್ಷಣಿಕ ಸೇವೆಯನ್ನು ನಿರಂತರವಾಗಿ ನೀಡುತ್ತಾ ಬರುತ್ತಿದ್ದು,  ಕೃಷ್ಣ ಕುಮಾರ್ ಪೂಂಜ ಅವರ ಒಳ್ಳೆಯ ಕೆಲಸದೊಂದಿಗೆ ನಾವೂ ಕೈ ಜೋಡಿಸೋಣ ಎಂದರು.
ಸೇವಾಂಜಲಿ ಆರೋಗ್ಯ ಕೇಂದ್ರದ ವೈದ್ಯ ಡಾ. ಚೇತನ್ ಆರೋಗ್ಯ ಮಾಹಿತಿ ನೀಡಿದರು.  ಗ್ರಾಮೀಣ ಪ್ರದೇಶದ ತೀರ ಹಿಂದುಳಿದಿರುವ ಭಾಗದ ರೋಗಿಗಳಿಗೂ ಈ ಯೋಜನೆ ತಲುಪಬೇಕಾಗಿದೆ ಎಂದರು.
ಪುದು ಗ್ರಾ.ಪಂ. ಅಧ್ಯಕ್ಷೆ ರಶೀದಾ ಬಾನು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಸ್ವಾಗತಿಸಿ, ವಂದಿಸಿದರು.‌ಪ್ರಮುಖರಾದ ಪದ್ಮನಾಭ ಶೆಟ್ಟಿ ಪುಂಚಮೆ
ಕೃಷ್ಣ ತುಪ್ಪೆಕಲ್ಲು,‌ನಾರಾಯಣ ಬಡ್ಡೂರು
ಪ್ರಶಾಂತ್ ತುಂಬೆ, ವಿಕ್ರಂ ಬರ್ಕೆ ಮೊದಲಾದವರು ಹಾಜರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter