ಬಂಟ್ವಾಳ:ದ .ಕ , ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು,  ಉಪ ನಿರ್ದೇಶಕರ ಕಚೇರಿ ಶಿಕ್ಷಣ ಇಲಾಖೆ ದ . ಕ , ಹಾಗೂ  ಶ್ರೀ ರಾಮ ವಿದ್ಯಾ ಸಂಸ್ಥೆ  ಅರ್ಕುಳ ಫರಂಗಿಪೇಟೆ ಇವುಗಳ ಸಹಯೋಗದಲ್ಲಿ ಪ್ರೌಢ ಶಾಲಾ ವಿಭಾಗದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ  ಕಾರ್ಯಕ್ರಮ  ಅರ್ಕುಳ ಶ್ರೀ ರಾಮ ವಿದ್ಯಾ  ಸಂಸ್ಥೆಯಲ್ಲಿ ಗುರುವಾರ ನಡೆಯಿತು.


ದ.ಕ.ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಚೇರಿಯ ಆಡಳಿತ ಶಾಖೆಯ ಲಕ್ಷ್ಮೀನಾರಾಯಣ ಭಟ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿವಿದ್ಯಾರ್ಥಿಗಳಿಗೆ ಮತ್ತು ಯುವ ಸಮೂಹ  ಮತದಾನದ  ಬಗ್ಗೆ ಅರಿವು ಒಲವು ಹೊಂದಿರಬೇಕು ಎಂದು ಹೇಳಿದರು


  ಶಾಲಾಡಳಿತ ಮಂಡಳಿ ಕಾರ್ಯದರ್ಶಿ ಎ ಕೆ ಜಯರಾಮ ಶೇಖರವರು ಅದ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಪಂಚಾಯತ ನ  ಸಹಾಯಕ ಯೋಜನಾ ಸಮನ್ವಯ ಅಧಿಕಾರಿ ಶೋಭಾ ಜಿ , ಜಿಲ್ಲಾ ಪಂಚಾಯತ್ ತಾಂತ್ರಿಕ ಸಹಾಯಕರಾದ ಗಾಯತ್ರಿ ಭಟ್ , ಶಾಲಾ ಸಂಚಾಲಕರಾದ  ಎ.ಗೋವಿಂದ ಭಟ್ , ಶಾಲಾ ಮುಖ್ಯಸ್ಥರಾದ  ಕೆ.ಆರ್ .ದೇವದಾಸ್ , ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ದಿನೇಶ್ ಶೆಟ್ಟಿ ಕೊಟ್ಟಿಂಜ  ವೇದಿಕೆಯಲ್ಲಿ ಉಪಸ್ಥಿತರಿದ್ದರು
ಬಳಿಕ  ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳನ್ನು ನಡೆಸಲಾಯಿತು 

By Suddi9

Leave a Reply

Your email address will not be published. Required fields are marked *