ಪೊಳಲಿಯಲ್ಲಿ ಚಂಡಿಕಾಹೋಮ
ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಹರಕೆಯ ಚಂಡಿಕಾಹೋಮ ನ.೨೦ ರಂದು ಬುಧವಾರ ನೆರವೇರಿತು. ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್ , ನಾರಯಣ ಭಟ್ ಅರ್ಚಕರು, ಕೆ.ರಾಮಭಟ್, ಪರಮೇಶ್ವರ ಭಟ್ , ಪದ್ಮನಾಭಭಟ್, ಅನಂತ ಭಟ್ ಮಾಧವ ಭಟ್ ಹಾಗೂ ಅರ್ಚಕ ವೃಂದವರು ಹೋಮದಲ್ಲಿ ಭಾಗಿಯಾಗಿದ್ದರು.



ದೇವಾಲಯದಲ್ಲಿ ಭಕ್ತಾಧಿಗಳಿಂದ ಹರಕೆಯ ಚಂಡಿಕಾಹೋಮ ನಡೆಯುತ್ತದೆ ಇಂದು ಬುಧವಾರ ಬಡಕಬೈಲ್ ಮಲ್ಲಿಕಾ ಎಂ.ಚೌಟ ಮತ್ತು ಮನೆಯವರ ಚಂಡಿಕಾಹೋಮ ನೆರವೇರಿತು.

ಚಂಡಿಕಾಯಾಗದಲ್ಲಿ ಮಾಜಿ ರಾಜ್ಯಾಧ್ಯಕ್ಷ ನಳಿನ್ಕುಮಾರ್ ಕಟೀಲ್ , ಬಂಟ್ವಾಳ ಶಾಸಕ ಯು. ರಾಜೇಶ್ ನಾಯ್ಕ್ ಹಾಗೂ ಮಲ್ಲಕಾ ಚೌಟ ಕುಟುಂಬಸ್ತರು ಮತ್ತು ಭಕ್ತಾಧಿಗಳು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.