ಮೆಲ್ಕಾರ್: ಸಫಲ ಸೌಹಾರ್ದ ಸಹಕಾರಿ ಸಂಘದ 5 ನೇ ಶಾಖೆ ಉದ್ಘಾಟನೆ ಸಹಕಾರಿ ಸಂಘ ಸ್ವಾಭಿಮಾನದ ಜೀವನಕ್ಕೆ ಸಹಕಾರಿ: ಉಳಿಯ ದೇವು ಮೂಲ್ಯಣ್ಣ
ಬಂಟ್ವಾಳ:ಜಿಲ್ಲೆಯಲ್ಲಿ ಸಹಕಾರಿ ಸಂಘಗಳು ಯುವಜನತೆಗೆ ಉದ್ಯೋಗ ನೀಡುವುದರ ಜೊತೆಗೆ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಉಳಿತಾಯ ಮನೋಭಾವದಿಂದ ಸ್ವಾಭಿಮಾನದ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ಉಳ್ಳಾಲ ಉಳಿಯ ಶ್ರೀ ಉಳ್ಳಾಲ್ತಿ ಧರ್ಮರಸರ ಕ್ಷೇತ್ರದ ಧರ್ಮದಶರ್ಿ ದೇವು ಮೂಲ್ಯಣ್ಣ ಹೇಳಿದ್ದಾರೆ.
ಇಲ್ಲಿನ ಮೆಲ್ಕಾರ್ ನಲ್ಲಿ ಸೋಮವಾರ ಶುಭಾರಂಭಗೊಂಡ ಗುರುಪುರ-ಕೈಕಂಬ ಸಫಲ ಸೌಹಾರ್ದ ಸಹಕಾರಿ ಸಂಘದ 5ನೇ ಶಾಖೆ ಉದ್ಘಾಟಿಸಿ ಅವರು ಮಾತನಾಡಿದರು.

ಮುಂಬೈ ಸಾಫಲ್ಯ ಸೇವಾ ಸಂಘದ ಅಧ್ಯಕ್ಷ ಶ್ರೀನಿವಾಸ ಪಿ. ಸಪಲ್ಯ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ‘ ಸಹಕಾರಿ ಸಂಘದಲ್ಲಿ ಸೇವಾ ಮನೋಭಾವ ಮತ್ತು ಗ್ರಾಹಕರಿಗೆ ತ್ವರಿತವಾಗಿ ಸ್ಪಂದಿಸುವ ಗುಣದಿಂದ ಜನತೆಗೆ ಹತ್ತಿರವಾಗುತ್ತದೆ’ ಎಂದರು.
ಸಂಘದ ಅಧ್ಯಕ್ಷ ಸಂಜೀವ ಅಡ್ಯಾರ್ ಮಾತನಾಡಿ, ‘ ಮುಂದಿನ ದಿನಗಳಲ್ಲಿ ಎರಡು ಶಾಖೆ ಜೊತೆಗೆ ಗಾಣದ ಎಣ್ಣೆ ಉದ್ಯಮ ಆರಂಭಿಸಲು ಚಿಂತನೆ ನಡೆಸಲಾಗಿದೆ’ ಎಂದರು.
ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಭೇಟಿ ನೀಡಿ ಶುಭ ಹಾರೈಸಿದರು. ಕಟ್ಟಡ ಮಾಲೀಕ ಎಂ.ರಾಮರಾಜ್ ರಾವ್ ಭದ್ರತಾ ಕೊಠಡಿ, ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿದರ್ೇಶಕಿ ಭಾರತಿ ಭಟ್ ಶಾಖಾಧಿಕಾರಿ ಕೊಠಡಿ, ಮೈಸೂರು ಪ್ರಾಂತೀಯ ವ್ಯವಸ್ಥಾಪಕ ಗುರುಪ್ರಸಾದ್ ಬಂಗೇರ ನಗದು ಕೊಠಡಿ, ಅವಿಭಜಿತ ಜಿಲ್ಲಾ ಸೌಹಾರ್ದ ಅಭಿವೃದ್ಧಿ ಅಧಿಕಾರಿ ವಿಜಯ ಬಿ.ಎಸ್. ಗಣಕಯಂತ್ರ ಉದ್ಘಾಟಿಸಿದರು.
ಪುರಸಭಾಧ್ಯಕ್ಷ ಬಿ.ವಾಸು ಪೂಜಾರಿ ಲೊರೆಟ್ಟೋ ಮಾಸಿಕ ಠೇವಣಿ ಖಾತೆ ಪುಸ್ತಕ ಮತ್ತು ಶಂಭೂರು ಸೇಕ್ರೆಡ್ ಹಾಟರ್್ ಜೀಸಸ್ ಚಚರ್ಿನ ಧರ್ಮಗುರು ಸಂತೋಷ್ ಡಿಸೋಜ ಉಳಿತಾಯ ಖಾತೆ ಪುಸ್ತಕ ಬಿಡುಗಡೆಗೊಳಿಸಿದರು. ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಬಂಟ್ವಾಳ ತಾಲ್ಲೂಕು ಗಾಣಿಗರ ಸೇವಾ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ಸಪಲ್ಯ ಇಡ್ಕಿದು ಶುಭ ಹಾರೈಸಿದರು.
ಸಂಘದ ಉಪಾಧ್ಯಕ್ಷ ಪ್ರೇಮಾನಂದ ಎ., ಪ್ರಧಾನ ವ್ಯವಸ್ಥಾಪಕ ಪ್ರಮೋದ್, ಗೌರವ ಸಲಹೆಗಾರ ಹರಿದಾಸ್ ಯು., ಪ್ರಭಾರ ಶಾಖಾಧಿಕಾರಿ ತೃಪ್ತಿ, ನಿದರ್ೇಶಕರಾದ ರಮೇಶ್ ಎಸ್., ಭಾಸ್ಕರ್ ಸಪಳಿಗ, ಮಾಧವ ಸುವರ್ಣ, ಜಯರಾಮ್ ಬಿ., ವೆಂಕಟೇಶ್ ಎಂ., ಪಿ.ಗೋಪಾಲಕೃಷ್ಣ, ಅನಿಲ್ ಕುಮಾರ್, ಕೆ.ಮೋನಪ್ಪ ಸಪಲಿಗ, ತಿರುಮಲೇಶ್ ಸಪಳಿಗ, ಮೋಹಿನಿ ಎಚ್., ಅನಿತಾ, ಸತ್ಯಪ್ರಭಾ, ನಾಮನಿದರ್ೇಶಿತ ನಿದರ್ೇಶಕರಾದ ಯು.ಬಿ.ವಿಜಯ ಕುಮಾರ್, ಸೂರಜ್, ಶಾಖಾ ಉಸ್ತುವಾರಿ ಅಧ್ಯಕ್ಷ ಎಂ.ಎನ್.ಕುಮಾರ್, ಸದಸ್ಯರಾದ ದಾಮೋದರ ಮೆಲ್ಕಾರ್, ಪುರುಷೋತ್ತಮ ಎಸ್., ರಾಜೇಶ್ ಮೆಂಡನ್, ವೀಣಾ ವಿಶ್ವನಾಥ್, ವಸಂತಿ ಗಂಗಾಧರ್ ಇದ್ದರು.
ನಿದರ್ೇಶಕರಾದ ಮಾಧವ ಮಾವೆ ಸ್ವಾಗತಿಸಿ, ಮಹಾಬಲ ಅಡ್ಯಾರ್ ವಂದಿಸಿದರು. ಸಿಬಂದಿಗಳಾದ ಸುಕೇಶ್ ಠೇವಣಿದಾರರ ವಿವರ ನೀಡಿ, ದೀಪಕ್ ಅಡ್ಯಾರ್ ಕಾರ್ಯಕ್ರಮ ನಿರೂಪಿಸಿದರು.