ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ಪಾದುಕಾನ್ಯಾಶ
ಬಡಗಬೆಳ್ಳೂರು:ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ನೂತನ ಗರ್ಭಗುಡಿಯ ʼಪಾದುಕಾನ್ಯಾಶ” ಕಾರ್ಯಕ್ರಮವು ಕ್ಷೇತ್ರದ ತಂತ್ರೀಗಳಾದ ವಿಷ್ಣು ಮೂರ್ತಿತಂತ್ರೀ ನೇತೃತ್ವದಲ್ಲಿ ಸೋಮವಾರ ನೆರವೇರಿತು.
ಬೆಳಿಗ್ಗೆ ಘಂಟೆ 10:50ರ ಮಕರ ಲಗ್ನ ಸುಮೂಹೂರ್ತದಲ್ಲಿ ನೇರವೇರಿದ ʼಪಾದುಕಾನ್ಯಾಶ” ಕಾರ್ಯಕ್ರಮದಲ್ಲಿ ವಾಸ್ತು ಶಿಲ್ಪಿ ಪಳನಿ ಸ್ವಾಮಿ ಕಟೀಲು , ಗುರು ಭಟ್, ರಾಧಕೃಷ್ಣ ಆಳ್ವ ಅಮ್ಮುಂಜೆ( ಬಡಗಬೆಳ್ಳೂರು) ಕ್ಷೇತ್ರದ ಅರ್ಚಕರಾದ ರಮೇಶ್ ಪೂಜಾರಿ, ಕ್ಷೇತ್ರದ ಸಂದೀಪ್, ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.)ಇದರ ಸದಸ್ಯರು , ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಸರ್ವ ಸದಸ್ಯರು ಉಪಸ್ಥಿತರಿದ್ದರು.
ಡಿ. 8 ರಂದು ಭಾನುವಾರ ನಿಧಿಕುಂಭ ನೆರವೇರಲಿದೆ . ಈ ಪುಣ್ಯ ಕಾರ್ಯದಲ್ಲಿ ಭಗವದ್ಭಕ್ತರು ಹೆಚ್ಚಿನ ಸಂಖೈಯಲ್ಲಿ ಪಾಲ್ಗೊಂಡು ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿಸುವ. ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ (ರಿ.)