Published On: Wed, Oct 23rd, 2024

ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದಲ್ಲಿ ಪೋಷಕರ ಸಮಾವೇಶ

ಬಂಟ್ವಾಳ: ಕಲ್ಲಡ್ಕಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯದ ಪದವಿ ವಿಭಾಗ ಪೋಷಕರ ಸಮಾವೇಶವು ಪ್ರೇರಣಾ ಸಭಾಂಗಣದಲ್ಲಿ ನಡೆಯಿತು. 

ಹಿರಿಯರು ಭಾರತಮಾತೆಯ ಬಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಸಮಾವೇಶಕ್ಕೆ ಚಾಲನೆ ನೀಡಲಾಯಿತು.ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರು, ಶ್ರೀರಾಮ ವಿದ್ಯಾಸಂಸ್ಥೆಯ ಸಂಸ್ಥಾಪಕರಾದ ಡಾ. ಪ್ರಭಾಕರ್ ಭಟ್ ಕಲ್ಲಡ್ಕ ಅವರು ವಿದ್ಯಾಸಂಸ್ಥೆ ಬೆಳೆದು ಬಂದ ಹಾದಿ, ವಿದ್ಯಾರ್ಥಿಗಳ ಉತ್ತಮ ಫಲಿತಾಂಶ ಮತ್ತು ವಿದ್ಯಾಸಂಸ್ಥೆಗೆ ಪೋಷಕರ ಸಹಕಾರ ಕುರಿತಾಗಿ ಶುಭಾಂಸ ನುಡಿಗಳನ್ನಾಡಿದರು.

 ಎಲ್ಲಾ ಉಪನ್ಯಾಸಕರು ತಮ್ಮನ್ನು ಪರಿಚಯಿಸಿದರು. ಬಳಿಕ ಪೋಷಕರು ತಮ್ಮ ಮಕ್ಕಳು ಮತ್ತು ಸಂಸ್ಥೆಯ ಕುರಿತಾಗಿ  ಮಾತನಾಡಿದರು. 

ಇದೇ ವೇಳೆ ೨೦೨೪-೨೫ ನೆ ಸಾಲಿನ ಪೋಷಕರ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.ವೇದಿಕೆಯಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ  ವಸಂತ ಮಾಧವ, ಕಾಲೇಜಿನ ಪ್ರಾಂಶುಪಾಲರಾದ  ಕೃಷ್ಣಪ್ರಸಾದ್ ಶ್ರೀಮಾನ್  ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಮನ್ವಿತ ಪ್ರಾರ್ಥಿಸಿದಳು. ಕಾಲೇಜಿನ ಉಪಪ್ರಾಂಶುಪಾಲರಾದ  ಯತಿರಾಜ್ ಸ್ವಾಗತಿಸಿ, ಪ್ರಸ್ತಾವನೆಗೈದರು.  ಉಪನ್ಯಾಸಕಿ ಅಶ್ವಿತ ವಂದಿಸಿದರು,  ಉಪನ್ಯಾಸಕಿ  ಜಯಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter