ಬಂಟ್ವಾಳ: ಪಣೋಲಿಬೈಲು ಶ್ರೀಕಲ್ಲುರ್ಟಿ- ಕಲ್ಕುಡ ದೈವಸ್ಥಾನಕ್ಕೆ ಭೇಟಿ ನೀಡಿದ ನಟ ದುನಿಯಾ ವಿಜಯ್

ಸ್ಯಾಂಡಲ್ ವುಡ್ ನಟ ದುನಿಯಾ ವಿಜಯ್ ಅವರು ತಾಲೂಕಿನ ಇತಿಹಾಸ ಪ್ರಸಿದ್ದ ಪಣೋಲಿಬೈಲು ಶ್ರೀಕಲ್ಲುರ್ಟಿ- ಕಲ್ಕುಡ ದೈವಸ್ಥಾನಕ್ಕೆ ಮಂಗಳವಾರ ಭೇಟಿ ನೀಡಿ ದೈವ ದೇವರ ದರ್ಶನ ಪಡೆದರು.
ನಟ ದುನಿಯಾ ವಿಜಯ್ ಭೇಟಿ ನೀಡಿದ ಸಂದರ್ಭದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕರಾದ ವಾಸುಮೂಲ್ಯ ಅವರು ಪ್ರಾರ್ಥಿಸಿ ದೈವದ ಗಂಧ ಪ್ರಸಾದವನ್ನು ನೀಡಿದರು. ಈ ವೇಳೆ ದುನಿಯಾ ಅವರ ಪುತ್ರಿಯರು ಹಾಗೂ ಸ್ಥಳೀಯರಲ್ಲಿ ಪ್ರಮುಖರು ಉಪಸ್ಥಿತರಿದ್ದರು.