Published On: Sat, Oct 5th, 2024

ಪೊಳಲಿಯಲ್ಲಿ ನವರಾತ್ರಿ ಉತ್ಸವ: ದೇಗುಲದಲ್ಲಿ ಶಾಸಕ ರಾಜೇಶ್​​ ನಾಯ್ಕ್​ರಿಂದ ಚಂಡಿಕಾಹೋಮ

ಪೊಳಲಿ ಶ್ರೀ ರಾಜರಾಜೇಶ್ವರಿ ದೇಗುಲದಲ್ಲಿ ಇಂದು ಶನಿವಾರ ಮೂರನೇ ದಿನದ ನವರಾತ್ರಿ ಉತ್ಸವ ನಡೆಯಿತು. ಇಂದು ಬೆಳಿಗ್ಗೆ ಪೊಳಲಿ ದೇಗುಲದಲ್ಲಿ ಬಂಟ್ವಾಳ ಶಾಸಕ ರಾಜೇಶ್​​ ನಾಯ್ಕ್​​​​​ ಅವರ ವತಿಯಿಂದ ಚಂಡಿಕಾಹೋಮ ನಡೆಯಿತು. ಶ್ರೀಕ್ಷೇತದ ಪ್ರಧಾನ ಅರ್ಚಕರಾದ ಪವಿತ್ರಪಾಣಿ ಮಾಧವ ಭಟ್‌ , ನಾರಯಣ ಭಟ್​​​, ಕೆ.ರಾಮಭಟ್‌, ಪರಮೇಶ್ವರ ಭಟ್‌ , ಅನಂತ ಭ‌ಟ್‌ ಶಿವರಾಮ್‌ ಮಯ್ಯ, ಶ್ರೀಕಾಂತ್‌ ಮಯ್ಯ ಹಾಗೂ ಅರ್ಚ ವೃಂದವರು ಕೂಡ ಈ ಹೋಮದಲ್ಲಿ ಭಾಗಿಯಾಗಿದ್ದರು.

ದೇವಾಲಯದಲ್ಲಿ 9 ದಿನಗಳ ಕಾಲ ಭಕ್ತರಿಂದ ಹರಕೆಯ ಚಂಡಿಕಾಹೋಮ ನಡೆಯುತ್ತದೆ. ಮೊದಲ ದಿನ ರಂಗನಾಥ ಭ‌ಟ್‌ ಗಂದಾಡಿ , ಎರಡನೇ ದಿನ ಭುವನೇಶ್ ಪಚ್ಚಿನಡ್ಕ ಅವರ ಪರವಾಗಿ ನಡೆಯಿತು. ಮೂರನೇ ದಿನದಂದು ರಾಜೇಶ್‌ ನಾಯ್ಕ ಅವರ ಪರವಾಗಿ ಚಂಡಿಕಾಹೋಮ ನೆರವೇರಿತು. ನವರಾತ್ರಿ ದಿನ ದೇವಿಗೆ ವಿಶೇಷ ಪೂಜೆ ಹಾಗೂ ವಿಶೇಷ ಅಲಂಕಾರಗಳು ನಡೆಯುತ್ತದೆ. ನವರಾತ್ರಿ ದಿನ ಭಕ್ತ ಸಾಗರ ದೇಗುಲಕ್ಕೆ ಹರಿದು ಬರುತ್ತದೆ. ಇದರ ಜತೆಗೆ ನವರಾತ್ರಿಯಂದು ಅದ್ದೂರಿಯಾಗಿ ಕಾರ್ಯಕ್ರಮಗಳು ನಡೆಯುತ್ತದೆ. ಇದರ ಜತೆಗೆ ಅನ್ನಸಂತರ್ಪಣೆ ನಡೆಯುತ್ತದೆ.

ನವರಾತ್ರಿ ಪೂಜೆಯು ಪ್ರತೀ ನಿತ್ಯ ರಾತ್ರಿ 8:00 ಗಂಟೆಗೆ ನಡೆಯಲಿದ್ದು, ಪ್ರತಿದಿನ ಮಧ್ಯಾಹ್ನ ಭಕ್ತಾದಿಗಳಿಂದ ಹರಕೆಯ ಚಂಡಿಕಾಹೋಮವೂ ಸೇರಿದಂತೆ ಅಕ್ಟೋಬರ್ 11 ರಂದು ಶುಕ್ರವಾರ ಮಹಾನವಮಿ ಪ್ರಯುಕ್ತ ದೇವಳದ ವತಿಯಿಂದ ಚಂಡಿಕಾಹೋಮವೂ ಜರಗಲಿದೆ. ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವು ನಡೆಯಲಿದೆ.

ನವರಾತ್ರಿ ಪ್ರಯುಕ್ತ ದೇವಾಲಯದಲ್ಲಿ ನಡೆಯುವ ಕಾರ್ಯಕ್ರಮಗಳು

5-10-2024 ಶನಿವಾರದಂದು ಯಕ್ಷಕಲಾ ಪೊಳಲಿ ಇದರ 29 ವರ್ಷದ ವರ್ಷಂತುತ್ಸವದ ಅಂಗವಾಗಿ ಪೊಳಲಿ ಯಕ್ಷ ಉತ್ಸವ 2024, ಜಿಲ್ಲೆಯ ಸುಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಕಚ್ಚರ ಮಾಲ್ದಿ (ತುಳು) – ಭಾರತ ರತ್ನ ಯಕ್ಷಗಾನ ಬಯಲಾಟ.

6-10-2024 ಆದಿತ್ಯವಾರದಂದು ವಿಧುಷಿ ಶ್ರೀಮತಿ ವಿದ್ಯಾ ಮನೋಜ್ ಕಲಾನಿಕೇತನ ಡ್ಯಾನ್ಸ್‌ ಫೌಂಡೇಶನ್ (ರಿ), ಕಲ್ಲಡ್ಕ ಇವರ ಶಿಷ್ಯ ವೃಂದದವರಿಂದ ದೇವಿ ಭವತಾರಿಣಿ ಭರತನಾಟ್ಯ ಕಾರ್ಯಕ್ರಮ ಹಾಗೂ ಥಂಡರ್ ಗೈಸ್ (ರಿ) ಬಜಪೆ ತಂಡದವರಿಂದ – ಕ್ಷೇತ್ರ ಪುರಾಣ ಮಂಜರಿ ಭಕ್ತಿ ಭಾವದ ನೃತ್ಯ ಸಂಗಮ ಕಾರ್ಯಕ್ರಮ.

07-10-2024 ಸೋಮವಾರದಂದು ಆರ್ಯಭಟ ಪ್ರಶಸ್ತಿ ಸರಸ್ಥತ ಕಥಾ ಸಾರಥಿ ತೋನ್ಸೆ ಶ್ರೀ ಪಷ್ಟಲ್ ಕುಮಾರ್ ಅವರಿಂದ ಹರಿಕಥಾ ಕಾಲಕ್ಷೇಪ ಸತಿ ಸಾವಿತ್ರಿ ಹಾಗೂ ನೃತಾ ಸುಧಾ (ರಿ) ಮಂಗಳೂರು ವಿಧುಷಿ ಶ್ರೀಮತಿ ಸೌಮ್ಯ ಸುಧೀಂದ್ರ ರಾವ್ ಶಿಷ್ಯೆಯರಿಂದ ನೃತ್ಯಾರ್ಪಣಂ.

8-10-2024 ಮಂಗಳವಾರದಂದು ಜಿಲ್ಲೆಯ ಸುಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಭೀಷ್ಮ ವಿಜಯ

9-10-2024 ಬುಧವಾರದಂದು ರಾಮಕೃಷ್ಣ ತಪೋವನ ಪೊಳಲಿ ಯಕ್ಷಗಾನ ಕೇಂದ್ರದ ವಿದ್ಯಾರ್ಥಿಗಳಿಂದ ಮೋಹನ್ ಕುಮಾರ್ ಅಮ್ಮುಂಜೆ ಇವರ ನಿರ್ದೇಶನದಲ್ಲಿ ಯಕ್ಷಗಾನ ಬಯಲಾಟ ವೀರ ಬಬ್ರುವಾಹನ – ಅಗ್ರಪೂಜೆ ಹಾಗೂ ಶಿವರಂಜಿನಿ ಕಲಾ ಕೇಂದ್ರ ಪೊಳಲಿ / ಬೊಕ್ಕಸ ಅವರಿಂದ ವಿಶಿಷ್ಟ ಕಾರ್ಯಕ್ರಮ ಕಲಾ ಸಂಗಮ

10-10-2024 ಗುರುವಾರದಂದು ಸುನೀತಾ ಜಯಂತ ನಾಟ್ಯ ನಿಲಯ ಉಳ್ಳಾಲ ಇವರಿಂದ ಭರತನಾಟ್ಯ ಹಾಗೂ ಜನಪದ ನೃತ್ಯ ಕಾರ್ಯಕ್ರಮ, ಶ್ರೀಮತಿ ವಂದನಾ ಮೂರ್ತಿ ಬೆಂಗಳೂರು ತಂಡವರಿಂದ ಸುಗಮ ಸಂಗೀತ

11-10-2024 ಶುಕ್ರವಾರದಂದು ನವರಾತ್ರಿ ವೇಷಗಳ ಸಂಭ್ರಮ ಹೀಗೆ ಹತ್ತು ಹಲವು ಕಾರ್ಯಕ್ರಮಗಳು ನಡೆಯಲಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter