ಪಿಲಾತಬೆಟ್ಟು ಪ್ರಾ. ಕೃ.ಪ. ಸ. ಸಂಘ ಕ್ಕೆ 74,33,751-48 ರೂ.ಲಾಭ: ತುಂಗಪ್ಪ ಬಂಗೇರ
ಬಂಟ್ವಾಳ:ಪುಂಜಾಲಕಟ್ಟೆಯನ್ನು ಕೇಂದ್ರಸ್ಥಾನವನ್ನಾಗಿರಿಸಿ ಕಾರ್ಯಾಚರಿಸುತ್ತಿರುವ ಪಿಲಾತಬೆಟ್ಟು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ನಿ.)ವು 2023-24 ನೇ ಸಾಲಿನಲ್ಲಿ ಸರಕಾರದಿಂದ ಬಡ್ಡಿ ಸಹಾಯಧನ ಬರಲು ಬಾಕಿದ್ದರೂ,ಸಂಘವು ಒಟ್ಟು 231 ಕೋ.ರೂ.ವ್ಯವಹಾರ ನಡೆಸಿ 74,33,751-48 ರೂ.ಲಾಭಗಳಿಸಿದೆ ಎಂದು ಸಂಘದ ಅಧ್ಯಕ್ಷರಾದ ಯಂ. ತುಂಗಪ್ಪ ಬಂಗೇರ ಅವರು ತಿಳಿಸಿದ್ದಾರೆ.

ಶನಿವಾರ ಸಂಘದ ‘ಸುವಿಧ ಸಹಕಾರಿ’ ಸಭಾ ಭವನದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಚತೆ ವಹಿಸಿ ಮಾತನಾಡಿ ,ಸದಸ್ಯರಿಗೆ ಶೇ.14 ಡಿವಿಡೆಂಟ್ ನ್ನು ಘೋಷಿಸಿದರು.3494 ಸದಸ್ಯರನ್ನು ಹೊಂದಿರುವ ಸಂಘವು 1,63,21,130-00 ಪಾಲು ಬಂಡವಾಳ, 20,22,68,538-74 ರೂ.ಠೇವಣಿ,46,76,82,473-63 ದುಡಿಯುವ ಬಂಡವಾಳ ಹೊಂದಿರುತ್ತದೆ.
ಪ್ರಸಕ್ತ ವರ್ಷದಲ್ಲಿ 26,99,89,795-00 ರೂ.ಸಾಲ ನೀಡಿದ್ದು,ಶೇ.97.16 ರಷ್ಟು ಸಾಲ ವಸೂಲಾತಿಯನ್ನು ಮಾಡಲಾಗಿದೆ ಎಂದು ತಿಳಿಸಿದ ಅವರು,109 ನವೋದಯ ಸ್ವಸಹಾಯ ಗುಂಪುಗಳನ್ನು ಹೊಂದಿದ್ದು,52,65,767-90 ರೂ.ಉಳಿತಾಯ ಆಗಿರುತ್ತದೆ ಎಂದರು.
ಪಡಿತರ,ರಸಗೊಬ್ಬರ ಸಹಿತ ವಿವಿಧ ಸಾಮಾಗ್ರಿಗಳ ವ್ಯಾಪಾರದಲ್ಲು ಸಂಘವು 7,46,223-35 ರೂ.ಲಾಭ ಗಳಿಸಿದೆ.ರೈತರು ಬೆಳೆಗಳಿಗೆ ಕೇಂದ್ರ ಮತ್ತು ರಾಜ್ಯಸರಕಾರಗಳು ಜಂಟಿಯಾಗಿ ಆಯೋಜಿಸಿರುವ ಹವಾಮಾನಾಧರಿತ ಬೆಳೆ ವಿಮೆಯನ್ನು ಮಾಡಿ ಇದರ ಪ್ರಯೋಜನ ಪಡೆಯಬೇಕು ಮತ್ತು ಸಂಘದ ಅಭಿವೃದ್ಧಿಯ ದೃಷ್ಠಿಯಿಂದ ಸಲಹೆ,ಸೂಚನೆಗಳಿದ್ದರೆ ನೇರವಾಗಿ ತಿಳಿಸುವಂತೆ ಅಧ್ಯಕ್ಷ ತುಂಗಪ್ಪ ಬಂಗೇರ ತಿಳಿಸಿದರು.
ಇದೇ ವೇಳೆ ಮೂರು ಅತ್ಯುತ್ತಮ ಸ್ವಸಹಾಯ ಸಂಘಗಳನ್ನು ಹಾಗೂ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಅಭಿನಂದಿಸಲಾಯಿತಲ್ಲದೆ ಸದಸ್ಯರ ಮಕ್ಕಳಿಗೆ ವಿದ್ಯಾರ್ಥಿ ವೇತನ ಹಾಗೂ ನಿಧನರಾದ ಸದಸ್ಯರ ಕುಟುಂಬಕ್ಕೆ ಮರಣನಿಧಿಯನ್ನು ವನ್ನು ವಿತರಿಸಲಾಯಿತು.
ಸಂಘದ ಉಪಾಧ್ಯಕ್ಷ ರವಿಶಂಕರ ಹೊಳ್ಳ,ನಿರ್ದೇಶಕರಾದ ಸುಂದರ ನಾಯ್ಕ್,ನಾರಾಯಣಪೂಜಾರಿ,ಶಿವಯ್ಯ,ಚಂದ್ರಶೇಖರ ಶೆಟ್ಟಿ,ಡಾ.ರಾಮಕೃಷ್ಣ ಎಸ್.,ಶುಭಕರ ಶೆಟ್ಟಿ,ಲಕ್ಷ್ಮೀನಾರಾಯಣ ಹೆಗ್ಡೆ,ಶಶಿಧರ ನಾಯ್ಕ್,ಹರ್ಷಿಣಿ ಪುಪ್ಪಾನಂದ,ಸರೋಜ ಶೆಟ್ಟಿ,ಆರ್ಥಿಕ ಬ್ಯಾಂಕ್ ಪ್ರತಿನಿಧಿ ಕೀರ್ತಿರಾಜ್,ನವೋದಯ ಸ್ವಸಹಾಯ ಸಂಘದ ಮೇಲ್ವಿಚಾರಕ ಪ್ರಭಾಶಂಕರ್ ವೇದಿಕೆಯಲ್ಲಿದ್ದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಬಿತಾ ಡಿ.ಅವರು ಗತವರ್ಷದ ವರದಿ,ಲೆಕ್ಕಪತ್ರವನ್ನು ಸಭೆಗೆ ಮಂಡಿಸಿದರು.
ನಿರ್ದೇಶಕ ಪಿ.ಎಂ.ಪ್ರಭಾಕರ ಸ್ವಾಗತಿಸಿದರು.ಸಿಬ್ಬಂದಿ ಜಯರಾಮ ನಾಯ್ಕ್ ವಂದಿಸಿದರು.