Published On: Fri, Aug 30th, 2024

ಬ್ರಿಡ್ಜ್​​​​​​​ ಸಾಮರ್ಥ್ಯ ಪರೀಕ್ಷಾ ಮಿಷನ್ ಇನ್ನೂ ಬಂದಿಲ್ಲ ಯಾಕೆ? ಅಧಿಕಾರಿಗಳನ್ನು ಪ್ರಶ್ನಿಸಿದ ಶಾಸಕ ರಾಜೇಶ್ ನಾಯ್ಕ್​​

ಶಾಸಕ ರಾಜೇಶ್ ನಾಯ್ಕ್​​

ಪೊಳಲಿ ಪಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಅಡ್ಡೂರು ಸೇತುವೆ ಬಗ್ಗೆ ದಿನಕ್ಕೊಂದು ಗೊಂದಲ, ದೊಡ್ಡ ತಲೆನೋವು ಆಗಿದೆ. ಏಕಾಏಕಿಯಾಗಿ ಸೇತುವೆಯನ್ನು ಬಂದ್​​ ಮಾಡಿ ಜನರಿಗೆ ತೊಂದರೆ ಎಂದು ಜಿಲ್ಲಾಧಿಕಾರಿ ಮುಂದೆ ಹೋಗಿ ಮನವಿ ಮಾಡಿ ಎಲ್ಲವೂ ಆಯಿತು, ಜಿಲ್ಲಾಧಿಕಾರಿಗಳು ಕೂಡ ಒಂದು ಬಾರಿ ಬರುವೇ ಎಂದು ಹೇಳಿ ಕೈಕೊಟ್ಟು, ನಂತರ ಜನರ ಆಗ್ರಹಕ್ಕೆ ಮನಿದು, ಸ್ಥಳಕ್ಕೆ ಭೇಟಿ, ಪರಿಶೀಲನೆಯನ್ನು ಕೂಡ ಮಾಡಿ, ಇಂಜಿನಿಯರ್​​ ಜತೆಗೆ ಮಾತಕತೆ ನಡೆಸಿ, ಬ್ರಿಡ್ಜ್​​​​​​​ ಸಾಮರ್ಥ್ಯ ಪರೀಕ್ಷಾ ಮಿಷನ್ ಬರುತ್ತದೆ ಎಂದು ಹೇಳಿ ಜನರಿಗೆ ಭರವಸೆ ನೀಡಿ ಹೋಗಿದ್ದಾರೆ. ಇಲ್ಲಿಯವರೆಗೆ ಯಾವುದೇ ಮಿಷನ್​​ ಬಂದಿಲ್ಲ. ಇದೀಗ ಈ ಬಗ್ಗೆ ಶಾಸಕರು ರಾಜೇಶ್ ನಾಯ್ಕ್​​ PW ಅಧಿಕಾರಿಗಳನ್ನು ಫೋನ್​​ ಮಾಡಿ ಪ್ರಶ್ನೆಸಿದ್ದಾರೆ.

ಎರಡು ದಿನದ ಒಳಗೆ ಮಿಷನ್​​​ ಬರುವುದಾಗಿ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಹೇಳಿದ್ದಾರೆ. ಆದರೆ ಒಂದು ವಾರವಾದರೂ ಇನ್ನೂ ಬಂದಿಲ್ಲ, ಏನು ಕತೆ ಎಂದು ವಿಚಾರಿಸಿದ್ದಾರೆ. ಇದಕ್ಕೆ PW ಅಧಿಕಾರಿ ಅಮರನಾಥ್​​, ಸರ್​​​​ ಈಗಾಗಲೇ ಈ ಬಗ್ಗೆ ವಿಚಾರಣೆ ಮಾಡಲಾಗಿದೆ. ತಾಂತ್ರಿಕ ತೊಂದರೆಯಿಂದ ಬರಲು ಸಾಧ್ಯವಾಗಿಲ್ಲ. ಅದು ದೆಹಲಿಯಿಂದ ಬರಬೇಕಿದೆ ಹಾಗಾಗಿ ತಡವಾಗಿದೆ. ಬಂದ ತಕ್ಷಣ ಈ ಬಗ್ಗೆ ಕೆಲಸ ಮಾಡಲಾಗುವುದು ಎಂದು ಹೇಳಿದ್ದಾರೆ. ಇದಕ್ಕೆ ಇದಕ್ಕೆ ಶಾಸಕರು ತಕ್ಷಣ ಈ ಬಗ್ಗೆ ವಿಚಾರಿಸಿ, ಇಲ್ಲಿಗೆ ಮಿಷನ್​​​ ಬರುವಂತೆ ನೋಡಿಕೊಳ್ಳಿ, ಅದಷ್ಟೂ ಬೇಗ ಮಿಷನ್​​ ಇಲ್ಲಿಗೆ ಬರಲಿ ಎಂದು ಶಾಸಕರು ಅಧಿಕಾರಿಗಳಿಗೆ ಹೇಳಿದ್ದಾರೆ.

ಶಾಸಕರು ಕೂಡ ಜನರ ಸಹಾಯಕ್ಕಾಗಿ ಒಂದು ಬಸ್​​​​ ವ್ಯವಸ್ಥೆಯನ್ನು ಕೂಡ ಮಾಡಿದ್ದಾರೆ. ಜನರಿಗೆ ಯಾವುದೇ ತೊಂದರೆ ಆಗದಂತೆ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲಾಧಿಕಾರಿ ಆ.22 ಸ್ಥಳಕ್ಕೆ ಡಿಸಿ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸ್ಥಳೀಯ ಜತೆಗೆ ಮಾತನಾಡಿದ್ದಾರೆ. ಸೋಮವಾರ ಅಥವಾ ಮಂಗಳವಾರ ಬ್ರಿಡ್ಜ್​​​​​​​ ಸಾಮರ್ಥ್ಯ ಪರೀಕ್ಷಾ ಮಿಷನ್​​​ ಬರುತ್ತದೆ. ಇನ್ನು ಮಂಗಳೂರಿನ ಕೆಲವೊಂದು ಸೇತುವೆಗಳ ಸಾಮರ್ಥ್ಯವನ್ನು ಪರೀಕ್ಷೆ ಮಾಡಲಿದೆ. ಇನ್ನು ಚೆಕ್​​ ಪೋಸ್ಟ್​​​ಗಳನ್ನು ನಿರ್ಮಾಣ ಮಾಡಲಾಗುವುದು ಎಂದು ಹೇಳಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter