Published On: Fri, Aug 16th, 2024

ಏಲಬೆ: ನೂತನ ಬಸ್ಸು ತಂಗುದಾಣ ಲೋಕಾರ್ಪಣೆ

ಬಂಟ್ವಾಳ :  ತಾಲೂಕಿನ ನರಿಕೊಂಬು  ಗ್ರಾಮದ ಏಲಬೆ ಎಂಬಲ್ಲಿ ದಿವಂಗತ ಲಿಂಗಪ್ಪ ಪೂಜಾರಿ ಅವರ  ಸ್ಮರಣಾರ್ಥ   ಕುಟುಂಬಸ್ಥರಿಂದ  ನೂತನವಾಗಿ ನಿರ್ಮಿಸಿದ   ಬಸ್ಸು ತಂಗುದಾಣವನ್ನು ಲೋಕಾರ್ಪಣೆ ಮಾಡಲಾಯಿತು.


ನರಿಕೊಂಬು ಗ್ರಾಮ ಪಂಚಾಯತ್ ಸದಸ್ಯರಾದ ಚೇತನ್ ಏಲಬೆ ತಂಗುದಾಣವನ್ನು ಉದ್ಘಾಟಿಸಿ  ದಿವಂಗತ ಲಿಂಗಪ್ಪ ಪೂಜಾರಿ ಯವರ ನೆನಪು ಶಾಶ್ವತವಾಗಿ ಉಳಿಯಲು ಕುಟುಂಬಸ್ಥರಿಂದ ನಿರ್ಮಿಸಲಾದ ಈ ಬಸ್ಸು ತಂಗುದಾಣ ಸಹಕಾರಿಯಾಗಿದೆ ಎಂದರು. 
ಬಸ್ಸು ತಂಗುದಾಣದ  ನಾಮಫಲಕವನ್ನು ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರಾದ ಉಮೇಶ್ ಬೋಳಂತುರು ಆವರಣಗೊಳಿಸಿದರು,
ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ   ಸದಸ್ಯ ಪುರುಷೋತ್ತಮ ಸಾಲಿಯನ್, ರೊಟೇರಿಯನ್  ಪ್ರಕಾಶ್ ಕಾರಂತ್,  ಗ್ರಾ. ಪಂ.ನ ಮಾಜಿ ಅಧ್ಯಕ್ಷರಾದ ವಿನುತ ಪುರುಷೋತ್ತಮ್, ಮಹಮ್ಮಾಯಿ  ಸೇವಾ ಸಮಿತಿಯ ಅಧ್ಯಕ್ಷರಾದ ಕಿರಣ್ ಏಲಬೆ, ಜಿಲ್ಲಾ ಯುವ ಮೋರ್ಚಾದ ಕಾರ್ಯದರ್ಶಿಯಾಗಿರುವ ಸುರೇಶ್ ಕೋಟ್ಯಾನ್,  ಪದ್ಮನಾಭ ಮಯ್ಯ ಏಲಬೆ,  ಅಲ್ಫೋನ್ಸ್ ಮೆನೇಜಸ್, ಆಲ್ಬರ್ಟ್ ಮನೇಜಸ್, ವಿಶ್ವನಾಥ ಕೊಡಂಗೆ ಕೋಡಿ, ಮಹಮಾಯಿ ಮಹಿಳಾ ಮಂಡಲದ ಅಧ್ಯಕ್ಷರಾದ  ವಿನಯ ದಿಂಡಿಕೆರೆ, ದಿವಂಗತ ಲಿಂಗಪ್ಪ ಪೂಜಾರಿ ಅವರ ಮಕ್ಕಳಾದ ಮೋಹನ ಪೂಜಾರಿ ಏಲಬೆ, ಸುಂದರ ಪೂಜಾರಿ ಏಲಬೆ, ತಾರನಾಥ ಏಲಬೆ, ಮತ್ತು ಕುಟುಂಬಸ್ಥರು ಹಾಗೂ  ಸ್ಥಳೀಯರು ಉಪಸ್ಥಿತರಿದ್ದರು. 

One attachment • Scanned by Gmail

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter