ಬಂಟ್ವಾಳ ಸೌತ್ ಕೆನರಾ  ಫೋಟೋಗ್ರಾಫರ್ಸ್ ಅಸೋಸಿಯೇಷನ್ ದ.ಕ ಮತ್ತು ಉಡುಪಿ ಜಿಲ್ಲೆ ಇದರ ಬಂಟ್ವಾಳ  ವಲಯದ 25  ನೇ ವಾರ್ಷಿಕ ಮಹಾಸಭೆಯು ಬಿ.ಸಿ. ರೋಡ್ ನ ಕನ್ನಡ ಭವನದಲ್ಲಿ ನಡೆಯಿತು.
ವಲಯದ  ಅಧ್ಯಕ್ಷರಾದ  ಕಿಶೋರ್   ಕುಮಾರ್ ಅವರು ಅಧ್ಯಕ್ಷತೆ ವಹಿಸಿದ್ದರು.

ಅಸೋಸಿಯೇಷನ್ ನ ಜಿಲ್ಲಾಧ್ಯಕ್ಷರಾದ ಪದ್ಮಪ್ರಸಾದ್ ಜೈನ್  ಸಭೆಯನ್ನು ಉದ್ಘಾಟಿಸಿ ಶುಭ  ಹಾರೈಸಿದರು.
ಜಿಲ್ಲಾ ಸಂಚಾಲಕರಾದ ಕರುಣಾಕರ  ಕಾಣಂಗಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ  ದಯಾನಂದ್ ಬಂಟ್ವಾಳ,  ಜಿಲ್ಲಾ ಕಟ್ಟಡ ಸಮಿತಿ ಅಧ್ಯಕ್ಷರಾದ  ಆನಂದ್ ಎನ್, ಜಿಲ್ಲಾ ಉಪಾಧ್ಯಕ್ಷರಾದ  ರಮೇಶ್ ಕಲಾಶ್ರೀ, ಜಿಲ್ಲಾ ಕೋಶಾಧಿಕಾರಿ  ನವೀನ್ ರೈ ಪಂಜಳ, ಎಸ್ ಕೆಪಿ ವಿವಿದೋದ್ದೇಶ ಸ.ಸಂ.ನಿ.ದ ನಿರ್ದೇಶಕರಾದ  ಹರೀಶ್ ರಾವ್ , ವಲಯದ ಗೌರವಾಧ್ಯಕ್ಷರಾದ  ಹರೀಶ್ ಕುಂದರ್ ವೇದಿಕೆಯಲ್ಲಿದ್ದರು.


ರವಿ ಕಲ್ಪನೆ ಗತ ವರ್ಷದ ವರದಿಯನ್ನು  ವಾಚಿಸಿದರೆ, ಪ್ರಧಾನ ಕಾರ್ಯದರ್ಶಿ ಪ್ರಶಾಂತ್  ಕಲ್ಲಡ್ಕ ವಾರ್ಷಿಕ ವರದಿಯನ್ನು ವಾಚಿಸಿದರು. ಕೋಶಾಧಿಕಾರಿ ವರುಣ್  ಕಲಡ್ಕ ಲೆಕ್ಕಪತ್ರ ಮಂಡಿಸಿದರು.


   ಇದೇ ವೇಳೆ  23-24 ನೇ  ಸಾಲಿನ ಶೆಕ್ಷಣಿಕ ವರ್ಷದಲ್ಲಿ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿ ಯಲ್ಲಿ ಗರಿಷ್ಠ  ಅಂಕ  ಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ವಿದ್ಯಾನಿಧಿ ನೀಡಿ ಗೌರವಿಸಲಾಯಿತು.
    ಯೋಗೀಶ್ ಮೊಗರ್ನಾಡ್ ವಂದಿಸಿದರು.  ರಾಜೇಂದ್ರ ಬಿ.ಸಿ. ರೋಡ್ ಕಾರ್ಯಕ್ರಮ ನಿರೂಪಿಸಿದರು. 

By Suddi9

Leave a Reply

Your email address will not be published. Required fields are marked *