Published On: Thu, Jul 25th, 2024

ಬಿ.ಸಿ.ರೋಡಿನಲ್ಲಿ ಸುಂಟರಗಾಳಿಯ ಅವಾಂತರ,ಡಿವೈಎಸ್ಪಿ ಕಚೇರಿ ಪುಡಿ,ಪ್ಲೆಕ್ಸ್,ಮರ,ವಿದ್ಯುತ್ ಕಂಬ ಧರಾಶಾಹಿ

ಬಂಟ್ವಾಳ: ಮಂಗಳವಾರ ರಾತ್ರಿ ವೇಳೆ ಬಿ.ಸಿ.ರೋಡಿನಲ್ಲಿ ಬೀಸಿದ ಸುಂಟರಗಾಳಿಗೆಇಡೀ ಬಿ.ಸಿ.ರೋಡು ಮಾತ್ರವಲ್ಲ ಪಕ್ಕದ ಬಂಟ್ಚಾಳವು ತತ್ತರಿಸಿದೆ. ಬಿ.ಸಿ.ರೋಡು ವೃತ್ತಬಳಿ ವಿದ್ಯುತ್ ಕಂಬಗಳು,ತುಕ್ಕು ಹಿಡಿದಿದ್ದ ಟವರ್,ರಸ್ತೆಯುದ್ದಕ್ಕು ರಾರಾಜಿಸುತ್ತಿದ್ದ ಎಲ್ಲಾ ಪ್ಲಕ್ಸ್ ಗಳು,ನಾಮಫಲಕಗಳು,ಬೃಹತ್ ಮರ ಬುಡಸಮೇತ ಧರಾಶಾಹಿಯಾಗಿದೆ.


ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು. ಈಗಾಗಲೇ ಬಿ.ಸಿ.ರೋಡ್ ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂದರ್ಭ ಸವಾರರಿಗೆ ಚಾಲಕರಿಗೆ ಗೊಂದಲಗಳು ಉಂಟಾಗುತ್ತಿದ್ದು, ರಾತ್ರಿ ವೇಳೇ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತಲ್ಲದೆ ವಿದ್ಯುತ್ ಕಡಿತದಿಂದ ಇಡೀ ಬಿ.ಸಿ.ರೋಡು,ಬಂಟ್ವಾಳ ಕತ್ತಲಾವರಿಸಿತ್ತು.

ಬುಡಸಮೇತ ಮರ ಧರಾಶಾಹಿ
ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಸುಂಟರಗಾಳಿಯ ಈ ಅವಾಂತರ ಸೃಷ್ಠಿಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.


ಬಿ.ಸಿ.ರೋಡ್ ನ ನರ್ಸಿಂಗ್ ಹೋಂಗೆ ತೆರಳುವ ಮಾರ್ಗದಲ್ಲಿ 2, ಸರ್ಕಲ್ ಬಳಿ 3 ಒಟ್ಟು 5 ವಿದ್ಯುತ್ ಕಂಬಗಳು ಉರುಳಿವೆ. ಈ ಘಟನೆಯಿಂದ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು.
ಬಂಟ್ಚಾಳ ಭೂ ಬ್ಯಾಂಕ್ ಜಾಗದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ಮಾರ್ಗಸೂಚಿಯ  ನಾಮಫಲಕವನ್ನು ಗಾಳಿ ಉರುಳಿಸಿದರೆ, ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿದ್ದ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಬಿದ್ದು ಇಡೀ ಕಾರನ್ನು ಅವರಿಸಿದೆ.  ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು. 

ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಂಟ್ವಾಳ ಪೊಲೀಸ್ ಸಿಬಂದಿ ಸಾರ್ವಜನಿಕರ ಸಹಾಯದಿಂದ ನಿಯಂತ್ರಣಕ್ಕೆ ತಂದರು.
ಡಿವೈಎಸ್ಪಿ ಕಚೇರಿ ಪುಡಿ:
ಮಳೆಯ ಜೊತೆ ಗಾಳಿಯ ತೀವ್ರತೆ ಎಷ್ಠಿತ್ತಂದರೆ  ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗಿರುವುದಲ್ಲದೆ   ಬಂಟ್ವಾಳ ಪೊಲೀಸ್ ಠಾಣೆಯ ಹಳೇ ಕಚೇರಿ ಇದೀಗ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ  ಕಚೇರಿಯಾಗಿ ಪರಿವರ್ತನೆಯಾಗಿದ್ದು,ಇದರ ಹಿಂಬದಿಯಲ್ಲಿರುವ ತೆಂಗಿನ ಮರ ಡಿವೈಎಸ್ಪಿ ಕಚೇರಿ ಮಾಡಿನ ಮೇಲೆ  ಬಿದ್ದು ಪುಡಿ,ಪುಡಿಯಾಗಿದೆ.ಪರಿಣಾಮ  ಅಪಾರನಷ್ಟವುಂಟಾಗಿದೆ.ಡಿವೈಎಸ್ಪಿಯವ ಛೇಂಬರ್ ನ ಮೇಲೆಯೇ ಮರ ಬಿದ್ದಿದ್ದು,ಹಂಚು ಪುಡಿಯಾಗಿ ಕೊಠಡಿಯೊಳಗೆ ಬಿದ್ದಿದ್ದರೆ,ಸೀಯಾಳ ,ತೆಂಗಿನಕಾರಿ ಕೂಡ ಕಚೇರಿಯೊಳಗೆ ಬಿದ್ದಿದೆ.

ಈ ಸಂದರ್ಭ ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕೆಲವೇ ಹೊತ್ತಿನ ಮೊದಲು ಕಚೇರಿಯಿಂದ ಮನೆಗೆ ತೆರಳಿದ್ದು, ಅಪಾಯ ತಪ್ಪಿದೆ.

ಪ್ಲೆಕ್ಸ್ ನಿಷೇಧ ಕಡತಕ್ಕೆ ಸೀಮಿತ:

ಬಿ.ಸಿ.ರೋಡಿನ ವೃತ್ತ ಬಳಿ‌ಎಲ್ಲಿ ನೋಡಿದರೂ ಪ್ಲೆಕ್ಸ್ ಗಳೇ ತುಂಬಿರುತ್ತದೆ.ಒಂದೆಡೆ ಪ್ಲಕ್ಸ್ ಅಳವಡಿಕೆ ನಿಷೇಧ ಎಂದು ಪುರಸಭೆಯಲ್ಲಿ ನಿರ್ಣಯ ಕೈಗೊಂಡರೂ ಅದು ಕಡತಕ್ಕೆ ಮಾತ್ರ ಸೀಮಿತವಾಗಿದ್ದು,ರಸ್ತೆಬದಿಯಲ್ಲಿ ಪ್ಲೆಕ್ಸ್ ಹಾವಳಿ ನಿಂತಿಲ್ಲ.
ಮಂಗಳವಾರ ರಾತ್ರಿ ಬೀಸಿದ ಗಾಳಿ ಬಿ.ಸಿ.ರೋಡು ವೃತ್ತ ಬಳಿ ರಾರಾಜಿಸುತ್ತಿದ್ದ ಬಹುತೇಕ ಪ್ಲೆಕ್ಸ್ ಗಳು‌ರಸ್ತೆಗೆ ಉರುಳಿ ಬಿದ್ದಿದೆ.ಅದೃಷ್ಟವಶಾತ್ ಈಸಮಯದಲ್ಲಿ ಯಾವುದೇ ವಾಹನಗಳು ಸಂಚಾರ ಇಲ್ಲದಿದ್ದರಿಂದ ಸಂಭವಿಸಬಹುದಾಗಿದ್ದ ಜೀವ ಹಾನಿ ತಪ್ಪಿದೆ. ಅದೇ ರೀತಿ ರಸ್ತೆ ಬದಿಯ ಅಪಾಯಕಾರಿಯಾದ ಮರದಗೆಲ್ಲುಗಳನ್ನು ಮಳೆಗಾಲದ ಮುನ್ನ ಕತ್ತರಿಸುವಂತೆ ನೀಡಲಾಗುವ ಸೂಚನೆ ಪ್ರಾಕೃತಿಕ ವಿಕೋಪ ಸಭೆಗೆ ಮಾತ್ರ ಸೀಮಿತವಾಗಿದೆ.ಬಳಿಕ ಅರಣ್ಯ ಸಹಿತ ಎಲ್ಲರು ಅವರವರ ಕಾರ್ಯದಲ್ಲಿರುವತ್ತಾರೆ. ಮಂಗಳವಾರ ರಾತ್ರಿಯ ಸುಂಟರಗಾಳಿಗೆ ಬೃಹತ್ ಗಾತ್ರದ ಮರ,ಅಪಾಯಕಾರಿ ಮರದ ಗೆಲ್ಲು ರಸ್ತೆಗೆ,ವಿದ್ಯುತ್ ತಂತಿ ಮೇಲೆ ಬಿದ್ದು ಅವಾಂತರ ಸೃಷ್ಠಿಸಿದ ಬಳಿಕ ಅಧಿಕಾರಿಗಳು ಎಚ್ಚೆತ್ತಿದ್ದಾರೆ.

ಹಲವು ವರ್ಷದ ಹಿಂದೆ ಅಡ್ಯಾರ್ ನಿಂದ ಎದ್ದ ಸುಂಟರಗಾಳಿ ಬಿ.ಸಿ.ರೋಡುವರೆಗೆ ವ್ಯಾಪಿಸಿ ಸಾಕಷ್ಟು ಅಸ್ತಿ-ಪಾಸ್ತಿ ಹಾನಿಯನ್ನುಂಟು ಮಾಡಿತ್ತು.ಅದೇ ಮಾದರಿಯಲ್ಲಿ ಈ ಸುಂಟರಗಾಳಿ ಬೀಸಿದ್ದು ಅಂದು ಬಿ.ಸಿ.ರೋಡಿನ ಕ್ವಾಟ್ರಸ್ ನಲ್ಲಿ  ನೂತನವಾಗಿ ಸ್ಥಾಪನೆಯಾದ ಗ್ರಾಮಾಂತರ ಠಾಣೆಗೆ ಮರ ಬಿದ್ದು ಹಾನಿಯಾಗಿದ್ದರೆ, ಮಂಗಳವಾರ ರಾತ್ರಿಯ ಗಾಳಿಗೆ ಬಂಟ್ವಾಳ ಹಳೇ ಪೊಲೀಸ್ ಠಾಣೆಯಲ್ಲಿ‌ ಕಾರ್ಯಾಚರಿಸುವ ಡಿವೈಎಸ್ಪಿಯವರ ಕಚೇರಿಯೇ ಮರ ಬಿದ್ದು ಪುಡಿಯಾಗಿದೆ.
ಅಂದು ಹಗಲು ಹೊತ್ತಿನಲ್ಲಿ ಬೀಸಿ ಅವಾಂತರ ಸೃಷ್ಠಿಸಿದ ಸುಂಟರಗಾಳಿ ಮಂಗಳವಾರ ಅದೇ ಮಾದರಿಯಲ್ಲಿ ರಾತ್ರಿ ಬೀಸಿದರಿಂದ ಸದ್ಯಕ್ಕೆ ಪ್ರಾಣಹಾನಿ ಸಂಭವಿಸಿಲ್ಲ,ಆದರೆ ಬಿ.ಸಿ.ರೋಡು ವೃತ್ತಬಳಿ ವಿದ್ಯುತ್ ಕಂಬಗಳು,ತುಕ್ಕು ಹಿಡಿದಿದ್ದ ಟವರ್,ರಸ್ತೆಯುದ್ದಕ್ಕು ರಾರಾಜಿಸುತ್ತಿದ್ದ ಎಲ್ಲಾ ಪ್ಲಕ್ಸ್ ಗಳು,ನಾಮಫಲಕಗಳು,ಬೃಹತ್ ಮರ ಬುಡಸಮೇತ ಧರಾಶಾಹಿಯಾಗಿದೆ.ಕೆಲ ಅಂಗಡಿಗಳ,ವಾಣಿಜ್ಯ ಸಂಕೀರ್ಣದ ನಾಮಫಲಕಗಳು ಹಾರಿ ಹೋಗಿವೆ.
ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು. ಈಗಾಗಲೇ ಬಿ.ಸಿ.ರೋಡ್ ನ ಬ್ರಹ್ಮಶ್ರೀ ನಾರಾಯಣಗುರು ವೃತ್ತದ ಸುತ್ತಲೂ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಸಂದರ್ಭ ಸವಾರರಿಗೆ ಚಾಲಕರಿಗೆ ಗೊಂದಲಗಳು ಉಂಟಾಗುತ್ತಿದ್ದು, ರಾತ್ರಿ ವೇಳೇ ಈ ಘಟನೆ ನಡೆದ ಹಿನ್ನೆಲೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಯಿತಲ್ಲದೆ ವಿದ್ಯುತ್ ಕಡಿತದಿಂದ ಇಡೀ ಬಿ.ಸಿ.ರೋಡು,ಬಂಟ್ವಾಳ ಕತ್ತಲಾವರಿಸಿತ್ತು.

ಬುಡಸಮೇತ ಮರ ಧರಾಶಾಹಿ
ಮಂಗಳವಾರ ರಾತ್ರಿ ಸುಮಾರು 9.30ರ ವೇಳೆಗೆ ಸುಂಟರಗಾಳಿಯ ಈ ಅವಾಂತರ ಸೃಷ್ಠಿಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.
ಬಿ.ಸಿ.ರೋಡ್ ನ ನರ್ಸಿಂಗ್ ಹೋಂಗೆ ತೆರಳುವ ಮಾರ್ಗದಲ್ಲಿ 2, ಸರ್ಕಲ್ ಬಳಿ 3 ಒಟ್ಟು 5 ವಿದ್ಯುತ್ ಕಂಬಗಳು ಉರುಳಿವೆ. ಈ ಘಟನೆಯಿಂದ ಯಾರಿಗೂ ಪ್ರಾಣಹಾನಿ ಆಗಿಲ್ಲ. ಆದರೆ ದಿಢೀರನೆ ನಡೆದ ಘಟನೆಯಿಂದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸಂಚರಿಸುವ ವಾಹನಗಳಿಗೆ ಅಡಚಣೆ ಉಂಟಾದವು.
ಬಂಟ್ಚಾಳ ಭೂ ಬ್ಯಾಂಕ್ ಜಾಗದಲ್ಲಿ ಪೊಲೀಸ್ ಸ್ಟೇಶನ್ ಗೆ ತೆರಳುವ ಮಾರ್ಗಸೂಚಿಯ  ನಾಮಫಲಕವನ್ನು ಗಾಳಿ ಉರುಳಿಸಿದರೆ, ಹಿಂದಿನ ಬಿಡಿಒ ಕಚೇರಿ ಇದ್ದ ಜಾಗದಲ್ಲಿ ನಿಲುಗಡೆಯಾಗಿದ್ದ ಮಾರುತಿ ಝೆನ್ ಕಾರಿನ ಮೇಲೆ ಮರದ ಗೆಲ್ಲುಗಳು ಬಿದ್ದು ಇಡೀ ಕಾರನ್ನು ಅವರಿಸಿದೆ.  ಘಟನೆ ನಡೆದ ಕೂಡಲೇ ಕಂದಾಯ, ಅಗ್ನಿಶಾಮಕ, ಮೆಸ್ಕಾಂ ಸಹಿತ ವಿವಿಧ ಇಲಾಖಾಧಿಕಾರಿಗಳು, ಸಾರ್ವಜನಿಕರು ಸೇರಿ ತತ್ ಕ್ಷಣದ ಕ್ರಮಗಳನ್ನು ಕೈಗೊಂಡರು. 

ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು, ಬಂಟ್ವಾಳ ಪೊಲೀಸ್ ಸಿಬಂದಿ ಸಾರ್ವಜನಿಕರ ಸಹಾಯದಿಂದ ನಿಯಂತ್ರಣಕ್ಕೆ ತಂದರು.
ಡಿವೈಎಸ್ಪಿ ಕಚೇರಿ ಪುಡಿ:
ಮಳೆಯ ಜೊತೆ ಗಾಳಿಯ ತೀವ್ರತೆ ಎಷ್ಠಿತ್ತಂದರೆ  ಬಂಟ್ವಾಳ ತಾಲೂಕಿನ ಅನೇಕ ಕಡೆಗಳಲ್ಲಿ ಹಾನಿಯಾಗಿರುವುದಲ್ಲದೆ   ಬಂಟ್ವಾಳ ಪೊಲೀಸ್ ಠಾಣೆಯ ಹಳೇ ಕಚೇರಿ ಇದೀಗ ಬಂಟ್ವಾಳ ಉಪವಿಭಾಗದ ಡಿವೈಎಸ್ಪಿ  ಕಚೇರಿಯಾಗಿ ಪರಿವರ್ತನೆಯಾಗಿದ್ದು,ಇದರ ಹಿಂಬದಿಯಲ್ಲಿರುವ ತೆಂಗಿನ ಮರ ಡಿವೈಎಸ್ಪಿ ಕಚೇರಿ ಮಾಡಿನ ಮೇಲೆ  ಬಿದ್ದು ಪುಡಿ,ಪುಡಿಯಾಗಿದೆ.ಪರಿಣಾಮ  ಅಪಾರನಷ್ಟವುಂಟಾಗಿದೆ.ಡಿವೈಎಸ್ಪಿಯವ ಛೇಂಬರ್ ನ ಮೇಲೆಯೇ ಮರ ಬಿದ್ದಿದ್ದು,ಹಂಚು ಪುಡಿಯಾಗಿ ಕೊಠಡಿಯೊಳಗೆ ಬಿದ್ದಿದ್ದರೆ,ಸೀಯಾಳ ,ತೆಂಗಿನಕಾರಿ ಕೂಡ ಕಚೇರಿಯೊಳಗೆ ಬಿದ್ದಿದೆ.

ಈ ಸಂದರ್ಭ ಡಿ.ವೈ.ಎಸ್.ಪಿ ವಿಜಯಪ್ರಸಾದ್ ಅವರು ಕೆಲವೇ ಹೊತ್ತಿನ ಮೊದಲು ಕಚೇರಿಯಿಂದ ಮನೆಗೆ ತೆರಳಿದ್ದು, ಅಪಾಯ ತಪ್ಪಿದೆ.

ಅಂದು ಗ್ರಾಮಾಂತರ ಠಾಣೆ:

  ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸದ ಲೈನ್ ನಲ್ಲಿದ್ದ ವಸತಿಯೊಂದರಲ್ಲಿ  ಸ್ಥಾಪನೆಯಾಗಿ‌ ಕಾರ್ಯಾರಂಭಿಸಿತ್ತು. ಕೆಲ ಸಮಯದ ಬಳಿಕ‌ ಬಂದ ಸುಂಟರಗಾಳಿಗೆ ಅಲ್ಲೇ ಇದ್ದ ಬೃಹತ್ ಗಾತ್ರದ ಮರವೊಂದು ಬುಡ ಸಮೇತ ಗ್ರಾಮಾಂತರ ಠಾಣೆಯ ಮೇಲೆಯೇ ಬಿದ್ದು,ಹಂಚು ಪುಡಿ,ಪುಡಿಯಾಗಿ ಅಪಾರ ನಷ್ಟ ಉಂಟಾಗಿತ್ತು.ಅಂತಹದೇ ಮಾದರಿಯಲ್ಲಿ‌ ಡಿವೈಎಸ್ಪಿ ಕಚೇರಿ ಮೇಲೆ ಮರ ಬಿದ್ದಿದೆ.ಆದರೆ ಅಂದಿನ ಘಟನೆ ಈಗ ಠಾಣೆಯಲ್ಲಿರುವ ಯಾವ ಅಧಿಕಾರಿಗಳು,ಸಿಬ್ಬಂದಿಗಳಿಗೆ ಮಾಹಿತಿ ಇರಲಿಕ್ಕಿಲ್ಲ ಎಂಬುದಿಲ್ಲ ಗಮನಾರ್ಹ ಅಂಶ.
ಬರದಿಂದ ರಿಪೇರಿ ಕಾರ್ಯ: ನಾರಾಯಣ ಭಟ್
ಪಾಕೃತಿಕ ವಿಕೋಪದಿಂದಾಗಿ ಬಿ.ಸಿ.ರೋಡು ಸುತ್ತಮುತ್ತ ವಿದ್ಯುತ್ ಕಂಬ ಹಾಗೂ ತಂತಿಗಳು ತುಂಡಾಗಿ ಬಿದ್ದು ಲಕ್ಷಾಂತರ ರೂ ನಷ್ಟ ಸಂಭವಿಸಿದೆ.
ಬಂಟ್ವಾಳ, ಗೂಡಿನ ಬಳಿ, ಬಿ.ಸಿ.ರೋಡು ಪರಿಸರ  ವಿದ್ಯುತ್ ಸಂಪರ್ಕ ‌ಕಡಿತಗೊಂಡಿದೆ. ಬುಧವಾರ ಕಂಬಗಳ ಬದಲಾವಣೆ ಹಾಗೂ ವಿದ್ಯುತ್ ತಂತಿಗಳ ಜೋಡಣೆ ಬದಲಾವಣೆ ಕಾರ್ಯ
ಮೆಸ್ಕಾಂ ಇಲಾಖೆಯಿಂದ  ರಾತ್ರಿಯಿಂದಲೇ ಸಾಗಿದೆ. ಖಾಸಗಿ ಕಂಪೆನಿಯನ್ನು ಕರೆಸಿಕೊಂಡು‌ ಕಾಮಗಾರಿಗೆ ಚುರುಕು ನೀಡಲಾಗಿದೆ ಮೆಸ್ಕಾಂ ಅಧಿಕಾರಿ ನಾರಾಯಣ ಭಟ್   ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter