Published On: Tue, Jul 16th, 2024

ಕುಲವೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಉದ್ಘಾಟನೆ

ಕೈಕಂಬ: ನಮ್ಮ ದೇಶದ ಪರಂಪರೆಯನ್ನು ಉಳಿಸುವ ಹೈನುಗಾರಿಕೆ ಆಧ್ಯಾತ್ಮಿಕ ನಂಟನ್ನು ಹೊಂದಿರುವ ದೇಶದ ಸಂಸ್ಕೃತಿಯನ್ನು ಉಳಿಸುವ ವ್ಯವಸ್ಥೆಯಾಗಿದೆ. ದೇಶದ ವ್ಯವಸ್ಥೆಯಲ್ಲಿ ಅಥವಾ ಒಂದು ಮನೆಯ ವ್ಯವಸ್ಥೆಯಲ್ಲಿ ಮಹಿಳೆಯರ ಕ್ರೀಯಾಶೀಲತೆಯ ಮನಸ್ಸು, ಆತ್ಮವಿಶ್ವಾಸದ ಮನಸ್ಸು ಸುಭದ್ರ, ಶಶಕ್ತ, ಸ್ವಾವಲಂಬಿ ದೇಶದ ಅಡಿಪಾಯವಾಗಿದೆ. ಹೈನುಗಾರಿಕೆ ಮಹಿಳೆಯರ ಸಬಲೀಕರಣಕ್ಕೆ ಮೂಲವಾಗಿದ್ದು, ಅವಿಭಜಿತ ಜಿಲ್ಲೆಗಳಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ.

೩ಲಕ್ಷ ೧೦ ಸಾವಿರ ಲೀಟರ್ ಹಾಲು ಉತ್ಪಾದನೆಯಾಗುತ್ತಿದ್ದು, ೫ಲಕ್ಷ ಲೀಟರ್ ಹಾಲು ಮತ್ತು ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಇದೆ. ಹೈನುಗಾರಿಕೆ ಸ್ವ-ಉದ್ಯೋಗವಾಗಿದ್ದು, ತರಬೇತಿ ಪಡೆದು, ಆಧುನಿಕ ರೀತಿಯಲ್ಲಿ, ವೈಜ್ಞಾನಿಕವಾಗಿ, ತಾಂತ್ರಿಕ ವಿಧಾನದಲ್ಲಿ ಯುವಶಕ್ತಿ ಅದರಲ್ಲೂ ಮಹಿಳೆಯರು ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ಕೆ.ಪಿ. ಸುಚರಿತ ಶೆಟ್ಟಿ ಸಲಹೆ ಹೇಳಿದರು.

ಅವರು ಮಂಗಳೂರು ತಾಲೂಕು ಕುಲವೂರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘ (ನಿ.) ಇದರ ನೂತನ ಕಟ್ಟಡ ‘ಕ್ಷೀರಧಾರೆ’ಯನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು. ಅವಿಭಜಿತ ಜಿಲ್ಲೆಯಲ್ಲಿ ೭೪೩ ಹಾಲು ಉತ್ಪಾದನಾ ಸಂಘಗಳು ಮತ್ತು ೨೦೧ ಮಹಿಳಾ ಸಂಘಗಳು ಇವೆ.

ಪ್ರತಿಕೂಲ ಪರಿಸ್ಥಿತಿಯಲ್ಲೂ ಉತ್ಪಾದನೆ ಕಡಿಮೆ ಇದ್ದರೂ ಗುಣಮಟ್ಟವನ್ನು ಉಳಿಸಿಕೊಂಡು ರಾಜ್ಯದಲ್ಲಿಯೇ ದ.ಕ. ಹಾಲು ಒಕ್ಕೂಟ ಪ್ರಥಮ ಸ್ಥಾನದಲ್ಲಿದ್ದು ೮ ಕೋಟಿ ಲಾಭದಲ್ಲಿದೆ. ಲಾಭವನ್ನು ಬೇರೆ ಬೇರೆ ರೀತಿಯಲ್ಲಿ ಹಾಲು ಉತ್ಪಾದಕರಿಗೆ ಸಿಗುವಂತೆ ಪ್ರಯತ್ನ ನಡೆಸಲಾಡುತ್ತಿದೆ ಎಂದರು.


ನೂತನ ಕಟ್ಟಡದ ಗೋದಾಮು ಉದ್ಘಾಟಿಸಿದ ಒಕ್ಕೂಟದ ಉಪಾಧ್ಯಕ್ಷ ಎಸ್.ಬಿ. ಜಯರಾಮ ರೈ ಬಳಜ್ಜ ಮಾತನಾಡಿ,೧೯೮೬ರಲ್ಲಿ ಒಕ್ಕೂಟ ಸ್ಥಾಪನೆಯಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. ಒಕ್ಕೂಟ ಸ್ಥಾಪನೆಗಿಂತ ಮೊದಲು ಹಾಲು ಉತ್ಪಾದಕರು ಹಾಲನ್ನು ಹೋಟೆಲು, ಮನೆಗಳಿಗೆ ಮಾರಾಟ ಮಾಡುತ್ತಿದ್ದರು, ಆದರೆ ಒಕ್ಕೂಟ ಸ್ಥಾಪನೆಯಾದ ಬಳಿಕ ಎಲ್ಲಾ ಹಾಲನ್ನೂ ಒಕ್ಕೂಟವೇ ಖರೀದಿ ಮಾಡುತ್ತಿದೆ. ಒಕ್ಕೂಟದ ಲಾಭವನ್ನು ಉತ್ಪಾದಕರಿಗೆ ಸಿಗುವಂತೆ ಮಾಡಲಿದೆ. ವಿಪರೀತ ಏರಿಕೆಯಾಗಿರುವ ಹಿಂಡಿಯ ಬೆಲೆಯನ್ನು ಕಡಿಮೆ ಮಾಡುವ ಪ್ರಯತ್ನ ನಡೆಸಲಾಗುತ್ತಿದೆ. ಒಕ್ಕೂಟದ ಪ್ರಗತಿಯಲ್ಲಿ ಹೈನುಗಾರರ ಕೊಡುಗೆ ಅಪಾರವಾದುದು ಎಂದರು.

ಸಭಾಂಗಣವನ್ನು ಉದ್ಘಾಟಿಸಿದ ಮುತ್ತೂರು ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಆಳ್ವ ಗುಂಡ್ಯ, ಮುಖ್ಯ ಅತಿಥಿಗಳಾಗಿದ್ದ ಒಕ್ಕೂಟದ ನಿರ್ದೇಶಕರುಗಳಾದ ಸುಧಾಕರ ರೈ,, ಶ್ರೀಮತಿ ಸುಭದ್ರಾ ರಾವ್, ಸವಿತಾ ಶೆಟ್ಟಿ, ಶೇಖರಣೆ ಮತ್ತು ತಾಂತ್ರಿಕ ವಿಭಾಗದ ವ್ಯವಸ್ಥಾಪಕ ಡಾ. ರವಿರಾಜ್ ಉಡುಪ, ಉಪ ವ್ಯವಸ್ಥಾಪಕ ಡಾ. ಕೇಶವ ಸುಳ್ಳಿ, ಧರ್ಮಾಸ್ಟಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಐತಪ್ಪ, ನೂತನ ಕಟ್ಟಡ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಶೆಟ್ಟಿ ಮಾತನಾಡಿದರು.

ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಅಧ್ಯಕ್ಷೆ ಅನಿತಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಕಟ್ಟಡ ಸಮಿತಿಯ ಉಪಾಧ್ಯಕ್ಷ ಸತೀಶ್ ಪೂಜಾರಿ ಬಳ್ಳಾಜೆ, ಮಹಿಳಾ ಸಹಕಾರಿ ಸಂಘದ ಉಪಾಧ್ಯಕ್ಷೆ ಶಕುಂತಲಾ ಜೈನ್, ಮುಖಂಡರಾದ ಪ್ರವೀಣ್ ಕುಮಾರ್ ಅಗರಿ, ಭವಾನಂದ ಶೆಟ್ಟಿ, ಮುತ್ತೂರು ಪಂಚಾಯತ್ ಉಪಾಧ್ಯಕ್ಷೆ ಸುಷ್ಮಾ ಸಂತೋಷ್, ಪಿಡಿಓ ಪ್ರಮೋದ್ ನಾಯ್ಕ್, ಸದಸ್ಯರುಗಳಾದ ಪುಷ್ಪಾ ನಾಯ್ಕ್,ಜಗದೀಶ್ ದುರ್ಗಾಕೋಡಿ, ಶಶಿಕಲಾ, ಮಾಲತಿ ಉಪಸ್ಥಿತರಿದ್ದರು.


ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ ಪ್ರವೀಣ್ ಆಳ್ವ, ವಿಜಯಕುಮಾರ್ ಶೆಟ್ಟಿ, ಒಕ್ಕೂಟದ ಮಾರುಕಟ್ಟೆ ಅಧಿಕಾರಿ ಜಾನೆಟ್ ರೋಜಾರಿಯೋ ಮತ್ತು ವಿಸ್ತರಣಾಧಿಕಾರಿ ಸರೋಜಿನಿ ಅವರುಗಳನ್ನು ವೇದಿಕೆಯಲ್ಲಿ ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಬೇರೆ ಬೇರೆ ಸಹಕಾರಿ ಸಂಘಗಳ ಪ್ರಮುಖರನ್ನು ವೇದಿಕೆಯಲ್ಲಿ ಗೌರವಿಸಲಾಯಿತು.ಸಂಘದ ಕಾರ್ಯನಿರ್ವಾಹಣಾಧಿಕಾರಿ ವಾಣಿ ವಿವೇಕ್ ಆಳ್ವ ಸಂಘದ ಪ್ರಗತಿಯ ವರದಿ ಮಂಡಿಸಿದರು. ಶ್ವೇತಾ ಸ್ವಾಗತಿಸಿದರು. ಸ್ಮಿತಾ ಮೆಲಾಂಟ ನಿರೂಪಿಸಿ, ನಮಿತಾ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter