ಮುಂಬಯಿ : ಅಂತರರಾಷ್ಟ್ರೀಯ ಮಾನವ ಅಭಿವೃದ್ಧಿ ಮಂಡಳಿ ಇಂಟರ್ನ್ಯಾಷನಲ್ ಅಕ್ರೆಡಿಟೇಶನ್ ಅರ್ಗನೈಸೇಶನ್ (ಲಾವ್) ಯುಎಸ್ಎಕೆಒಎಲ್-ಎಸ್೨೬೭/೨೦೧೫-೧೬ ಅಡಿಯಲ್ಲಿ ಭಾರತ ಸರ್ಕಾರ ಇವರಿಂದ ಮೂಲ್ಕಿ ಇಲ್ಲಿನ ಡಾ| ಹರಿಶ್ಚಂದ್ರ ಸಾಲಿಯಾನ್ ಅವರನ್ನು ಸಾಮಾಜಿಕ ಸೇವೆಯ ಅಡಿಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಹರಿಶ್ಚಂದ್ರ ಅವರ ಸಮಾಜ, ಸರಕಾರಿ ಸೇವೆಯಲ್ಲಿ, ಸಾಹಿತ್ಯ, ಧಾರ್ಮಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ನೀಡಲಾಗುವುದು.ಗೋವಾ ರಾಜ್ಯದಲ್ಲಿ ಪಣಜಿ ಇಲ್ಲಿನ ಇನ್ಸಿಟ್ಯೂಟ್ ಮೆನೆಜಸ್ ಬ್ರಗಾಂಜಾ ಇಲ್ಲಿ ಇದೇ ಜೂ.೧೪ರ ಭಾನುವಾರ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.
(ಆರ್ಬಿಐ)
