ಬೆಂಜನಪದವು ಸರಕಾರಿ ಪ್ರೌಢಶಾಲೆಯಲ್ಲಿ ವನಮಹೋತ್ಸವ
ಬಂಟ್ವಾಳ: ಬೆಂಜನಪದವು ಸರಕಾರಿ ಪ್ರೌಢಶಾಲೆಯಲ್ಲಿ ಬಂಟ್ವಾಳ ಅರಣ್ಯ ಇಲಾಖೆಯ ಸಹಯೋಗದಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು.

ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀ ವಾಮನ ಆಚಾರ್ಯ ಗಿಡಗಳನ್ನು ನಾಟಿ ಮಾಡುವ ಮೂಲಕ ಚಾಲನೆ ನೀಡಿದರು.ಪ್ರಾಂಶುಪಾಲರಾದ ಕವಿತಾಹೇಮಚಂದ್ರ, ಬಂಟ್ವಾಳ ಅರಣ್ಯಾಧಿಕಾರಿಯವರಾದ ಪ್ರಜ್ವಲ್ ಶೆಟ್ಟಿ,ಕೃಷ್ಣ ಜೋಗಿ , ಜಿತೇಶ್ ,ರೊಟೇರಿಯನ್ ಪ್ರಕಾಶ್ ಬಾಳಿಗಾ,ಅಮ್ಮುಂಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷರಾದರಾಧಾಕೃಷ್ಣ ತಂತ್ರಿ, ರಾಮದಾಸ ಸಾಲ್ಯಾನ್,ದಿನೇಶ್ ವಿಟ್ಲ,ಉಪ ಪ್ರಾಂಶುಪಾಲರಾದ ಅನಂತಪದ್ಮನಾಭ ಶಿಬರೂರು ಉಪಸ್ಥಿತರಿದ್ದರು.
ಉಪನ್ಯಾಸಕ ರವಿಚಂದ್ರ ಮಯ್ಯ ಕಾರ್ಯಕ್ರಮ ನಿರೂಪಿಸಿದರು.ಅರಣ್ಯ ಇಲಾಖೆ ವತಿಯಿಂದ ವಿದ್ಯಾರ್ಥಿಗಳಿಗೆ 50 ವಿವಿಧ ಬಗೆಯ ಸಸಿಗಳನ್ನು ವಿತರಿಸಲಾಯಿತು