Published On: Sat, Jun 8th, 2024

ಕವಿ ಭಾಸ್ಕರ ಅಡ್ವಳರ ನೂತನ ಕೃತಿ “ಜೀವಸತ್ವ”, ಕೃತಿ ಬಿಡುಗಡೆ‌

ಬಂಟ್ವಾಳ: ಕವಿ ಭಾಸ್ಕರ  ಅಡ್ವಳರ ನೂತನ ಕೃತಿ “ಜೀವಸತ್ವ”, ವಿನೂತನ ಜ್ಞಾನದ ಕೆಕೆ ಒಗಟಿನ ಮಾಲೆಯನ್ನು ವ್ಯಂಗ್ಯ ಚಿತ್ರಕಾರ ವಿರಾಜ್ ಅಡೂರು ಅವರು  ಬಿಡುಗಡೆಗೊಳಿಸಿದರು.


ಬಂಟ್ವಾಳ ತಾಲೂಕಿನ ವಿಟ್ಲ ಚಂದಳಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ  ಕೃತಿ ಬಿಡುಗಡೆಗೊಳಿಸಿ ಮಾತಾಡಿದ ವಿರಾಜ್ ಅಡೂರು ಅವರು ಒಗಟುಗಳು ಬುದ್ಧಿಯನ್ನು ಮಸೆಯುತ್ತವೆ. ಒಗಟಿಗೆ ಉತ್ತರ ಶೋಧಿಸುವ ಕಾರಣದಿಂದ ಏಕಾಗ್ರತೆಯು ಬಲಗೊಳ್ಳುತ್ತದೆ. ಮಾತಿನ ಕಟ್ಟೆಗಳಲ್ಲಿ ನಮ್ಮ ಹಿರಿಯರು ಮನರಂಜನೆಗಾಗಿ ಒಗಟು ಹೇಳುತ್ತಿದ್ದರು. ಒಗಟು ಸಾಹಿತ್ಯದ ಅಂಗವಾಗಿದೆ. ಭಾಸ್ಕರ ಅಡ್ವಳರ ಕೃತಿ “ಜೀವಸತ್ವ” ಹಿರಿಯರು ಮತ್ತು ಕಿರಿಯರೆಲ್ಲರಿಗೂ ಸಹಕಾರಿಯಾಗಿದೆ ಎಂದರು.


ಕೃತಿಕಾರ ಭಾಸ್ಕರ ಅಡ್ವಳರು ಪ್ರಸ್ತಾವನೆಗೈದರು.ಬಂಟ್ವಾಳ ಮಕ್ಕಳ ಕಲಾಲೋಕ ಕನ್ನಡ ಸಾಹಿತ್ಯ ಪರಿಷತ್ತು  ಅಧ್ಯಕ್ಷ ರಮೇಶ ಎಂ ಬಾಯಾರು ಅಧ್ಯಕ್ಷತೆ ವಹಿಸಿದ್ದರು. ಚಂದಳಿಕೆ ಶಾಲಾ ಮುಖ್ಯೋಪಾಧ್ಯಾಯ ವಿಶ್ವನಾಥ ಗೌಡ ಕುಳಾಲು ಸ್ವಾಗತಿಸಿದರು,ಶಿಕ್ಷಕ ವೆಂಕಟೇಶ್ವರ ಭಟ್ ವಿಟ್ಲ ವಂದಿಸಿದರು, ಸಹ ಶಿಕ್ಷಕಿ ರೇಶ್ಮಾ ಲೂಯಿಸ್ ಕಾರ್ಯಕ್ರಮ ನಿರೂಪಿಸಿದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter