Published On: Fri, Feb 2nd, 2024

 ಫೆ.4 ರಂದು ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ‌ ಕೊಡಿಮರ ಸಮರ್ಪಣೆ

ಬಂಟ್ವಾಳ: ನಂದನ ಹಿತ್ತಿಲು ಶ್ರೀ ವೈದ್ಯನಾಥ ಅರಸು ಜುಮಾದಿ ಬಂಟ ದೈವಸ್ಥಾನಕ್ಕೆ‌ ಸಮರ್ಪಣೆ ಮಾಡಲಾಗುವ ನೂತನ ಕೊಡಿಮರದ ( ಧ್ವಜ ಸ್ತಂಭ) ವೈಭವಪೂರ್ಣವಾದ ಮೆರವಣಿಗೆ ಹಾಗೂ ತೈಲಾಧಿವಾಸ ಕಾರ್ಯಕ್ರಮ ಫೆ.04 ರಂದು ಭಾನುವಾರ‌ ನಡೆಯಲಿದೆ‌ ಎಂದು‌ ದೈವಸ್ಥಾನದ ಆಡಳಿತ‌ ಸಮಿತಿ‌ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ ತಿಳಿಸಿದ್ದಾರೆ.

ಇದೇ ಮೊದಲ ಬಾರಿಗೆ ಭಕ್ತರು ಕೋಡಿಮರವನ್ನು  ಭಜದಲ್ಲಿರಿಸಿಕೊಂಡು ಮೆರವಣಿಗೆಯಲ್ಲಿ ಸಾಗಿ ಬರಲಿದ್ದಾರೆ.ಅಂದು ಬೆಳಿಗ್ಗೆ 7-30ರಿಂದ  ಮೆರವಣಿಗೆ ಆರಂಭವಾಗಲಿದ್ದು,ದೈವಸ್ಥಾನದಲ್ಲಿ ಸಂಪನ್ನಗೊಂಡ ಬಳಿಕ ಸಾರ್ವಜನಿಕ ತೈಲಾಧಿವಾಸ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter