ಏಮಾಜೆಯಲ್ಲಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರೆಟ್ ರಸ್ತೆ ಲೋಕಾರ್ಪಣೆ
ಬಂಟ್ವಾಳ: ನೆಟ್ಲಮುಡ್ನೂರು ಗ್ರಾಮದ ಏಮಾಜೆಯಲ್ಲಿ 50 ಲಕ್ಷ ರೂ.ಅನುದಾನದಲ್ಲಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಯವರು ಬುಧವಾರ ಉದ್ಘಾಟಿಸಿ ಲೋಕಾರ್ಪಣೆಗೊಳಿಸಿದರು.

ಈ ಸಂದರ್ಭದಲ್ಲಿ ನೆಟ್ಲಮುಡ್ನೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶಕೀಲಾ ಕೆ.ಪೂಜಾರಿ, ಗ್ರಾಮ ಪಂಚಾಯತ್ ಸದಸ್ಯರು ಹಾಗೂ ನೆಟ್ಲಮುಡ್ನೂರು ಶಕ್ತಿಕೇಂದ್ರದ ಅಧ್ಯಕ್ಷರಾದ ಅಶೋಕ್ ರೈ , ಗ್ರಾಮ ಪಂಚಾಯತ್ ಸದಸ್ಯರುಗಳದ ಧನಂಜಯ ಗೌಡ, ಸುಜಾತಾ ಸಿ, ಜಗದೀಶ್ ಪೂಜಾರಿ,ಲತೀಫ್ ನೇರಳಕಟ್ಟೆ , ನೇರಳಕಟ್ಟೆ ಸಿ. ಎ. ಬ್ಯಾಂಕಿನ ಉಪಾಧ್ಯಕ್ಷ ರಾದ ಡಿ. ತನಿಯಪ್ಪ ಗೌಡ, ಈಶ್ವರ ಭಟ್, ನಾರಾಯಣ ಗೌಡ, ಸೋಮಶೇಖರ ಗೌಡ, ಲೋಕನಾಥ . ದಾಸ್ ವೆಂಕಟೇಶ್, ಅನಿತಾ, ಚೇತನ್ ಶೆಟ್ಟಿ, ನಿತಿನ್, ಮೋಹಣ ಗೌಡ, ದೇವದಾಸ್ ಶೆಟ್ಟಿ ಚಿದಾನಂದ ಶೆಟ್ಟಿ , ಗಿರೀಶ್ ಗೌಡ ಬೆರ್ಕೊಡಿ ಮೊದಲಾದವರು ಉಪಸ್ಥಿತರಿದ್ದರು.
