Published On: Sat, Nov 25th, 2023

ಅಕ್ರಮವಾಗಿ ಮರದ ದಿಮ್ಮಿ ಸಾಗಾಟ ಪತ್ತೆ : ಎರಡು ವಾಹನ ಸಹಿತ ಸೊತ್ತು ವಶ

ಬಂಟ್ವಾಳ: ಎರಡು ಪಿಕಪ್ ವಾಹನದಲ್ಲಿ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ವಲಯ ಅರಣ್ಯಾಧಿಕಾರಿ ಮತ್ತವರ ತಂಡ ಸಜಿಪಮುನ್ನೂರು ಮತ್ತು ಸಜೀಪಪಡುಗ್ರಾಮದ ಪ್ರತ್ಯೇಕ ಎರಡು ಸ್ಥಳಗಳಲ್ಲಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

ಬಂಟ್ವಾಳ ತಾಲೂಕು ಸಜೀಪ ಮುನ್ನೂರು ಗ್ರಾಮದ ಮಾರ್ನ ಬೈಲು ಹಾಗೂ ಉಳ್ಳಾಲ ತಾಲೂಕಿನ ಸಜಿಪಪಡು ಗ್ರಾಮದ ಕೋಟೆಕಣಿ ಎಂಬಲ್ಲಿ ಬಂಟ್ವಾಳ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಪಿ., ಮತ್ತವರ ತಂಡ ಕಾರ್ಯಾಚರಣೆ ನಡೆಸಿ ಕೆಎ 12 ಎ 1792 ಹಾಗೂ ಕೆಎ 18 0526 ನಂಬರಿನ ಎರಡು ಪಿಕಪ್ ವಾಹನಗಳಲ್ಲಿ ವಿವಿಧ ಜಾತಿಯ ಮರದ ದಿಮ್ಮಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆಹಚ್ಚಿ ಇಬ್ಬರು ಆರೋಪಿತರ ವಿರುದ್ಧ  ಪ್ರಕರಣ  ದಾಖಲಿಸಿದ್ದಾರೆ. ವಶಪಡಿಸಲಾದ ವಾಹನ ಸಹಿತ ಸೊತ್ತಿನ ಮೌಲ್ಯ ಒಟ್ಟು 6 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.

ಉಪವಲಯ ಅರಣ್ಯ ಅಧಿಕಾರಿ ಯಶೋಧರ, ಗಸ್ತು ಅರಣ್ಯ ಪಾಲಕರಾದ ಜಿತೇಶ್ ಪಿ, ಶೋಬಿತ್, ಸ್ಮಿತಾ ಮತ್ತು ರೇಖಾ ಸಚಿನ್, ಅರಣ್ಯ ವೀಕ್ಷಕರಾದ ಭಾಸ್ಕರ, ಇಲಾಖಾ ವಾಹನ ಚಾಲಕ ಜಯರಾಮ್ ಇವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಪ್ರಕರಣದ ಮುಂದಿನ ತನಿಖೆಯನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಅಂತೋನಿ ಎಸ್ ಮರಿಯಪ್ಪ ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀಧರ್  ಪಿ. ಇವರ ಮಾರ್ಗದರ್ಶನದಲ್ಲಿ ತನಿಖೆ ನಡೆಯುತ್ತಿದೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter