Published On: Tue, Nov 14th, 2023

ದೀಪಾವಳಿ ಪ್ರಯುಕ್ತ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು”‌ ಪೊಳಲಿ ಟೈಗರ್ಸ್ ವತಿಯಿಂದ ಶ್ರೀ ಕ್ಷೇತ್ರ ಪೊಳಲಿ ದೇವಸ್ಥಾನದಲ್ಲಿ 250 ಲೀಟರ್ ತುಪ್ಪದಿಂದ ಹಣತೆ ಬೆಳಗಿ “ತುಡಾರ್ ಪರ್ಬ”ಕ್ಕೆ ಚಾಲನೆ

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮೂರು ದಿನಗಳ ಕಾಲ ನಡೆಯುವ ದೀಪಾವಳಿ ಹಬ್ಬದ ಪ್ರಯುಕ್ತ “ಪುರಲ್ದ ಅಪ್ಪೆನ ಮೋಕೆದ ಬೊಳ್ಳಿಲು” ಪೊಳಲಿ ಟೈಗರ್ಸ್ ವತಿಯಿಂದ 250 ಲೀಟರ್ ತುಪ್ಪದಿಂದ ದೇವಾಲಯದಲ್ಲಿ ಪ್ರಥಮ ದಿನದಂದು ಹಣತೆ ಬೆಳಗಿ “ತುಡಾರ್ ಪರ್ಬ”ಕ್ಕೆ ಪೊಳಲಿ ದೇವಳದ ಅರ್ಚಕ ನಾರಾಯಣ್‌ ಭಟ್‌, ಶಾಸಕ ರಾಜೇಶ್‌ ನಾಯ್ಕ್‌ ಉಳಿಪ್ಪಾಡಿಗುತ್ತು, ರಾಷ್ಟೀಯ ಸ್ವಯಂಸೇವಕ ಸಂಘದ ಪದ್ಮನಾಭ ಬಂಟ್ವಾಳ, ಲೋಹಿತ್‌ ಮಂಗಳೂರು, ಶರಣ್‌ ಪಂಪ್ ವೆಲ್‌, ಶಿವಾನಂದ್‌ ಮೆಂಡನ್‌, ವೆಂಕಟೇಶ್‌ ನಾವಡ ಮತ್ತಿತರರು ಉಪಸ್ಥಿತರಿದ್ದು ದೀಪ ಬೆಳಗಿಸಿ ಚಾಲನೆ ನೀಡಿದರು.

ತುಡಾರ್‌ ಪರ್ಬದ ದ್ವಿತೀಯ ದಿನದಂದು ಪೊಳಲಿ ಅರ್ಚಕ ಪವಿತ್ರ ಪಾಣಿ ಮಾಧವ್‌ ಭಟ್‌ ದೀಪ ಬೆಳಗಿಸಿ ಉದ್ಘಾಟಿಸಿದರು. ತದನಂತರ ಪೊಳಲಿ ಹಾಗೂ ಇರುವೈಲು ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ಮತ್ತು ಬಡಗ ಎಡಪದವು ಭಜನಾ ತಂಡದಿಂದ ಕುಣಿತ ಭಜನೆ ನಡೆಯಿತು.

ಮಾಜಿ ಸಚಿವ ರಮಾನಾಥ ರೈ, ವರುಣ್‌ ಹೆಗ್ಡೆ, ವಿಜೇಶ್‌ ನಾಯ್ಕ್‌, ಗಿರೀಶ್‌ ಆಳ್ವ, ಪ್ರಸಾದ್‌ ಮಲ್ಲಿ, ನಿತಿನ್‌ ಕೊಟ್ಟಾರಿ, ಪೃಥ್ವಿ ಆಳ್ವ, ಜಗದೀಶ್‌ ಪಂಪ್‌ ವೆಲ್‌, ಭುವನೇಶ್‌ ಪಚ್ಚಿನಡ್ಕ, ಸಂತೋಷ್‌ ಶೆಟ್ಟಿ ಪೊಳಲಿ, ಹರೀಶ್‌ ಶೆಟ್ಟಿ ಪೊಳಲಿ, ಸುನೀಲ್‌ ಪೊಳಲಿ, ರಾಜೇಶ್‌ ಕೈಕಂಬ, ಚಂದ್ರಹಾಸ್‌ ಪಲ್ಲಿಪಾಡಿ,‌ ಲಕ್ಷ್ಮೀಶ್ ಶೆಟ್ಟಿ ಉಪಸ್ಥಿತರಿದ್ದರು.

ಭಕ್ತಾದಿಗಳು ದೇವಾಲಯದ ಸುತ್ತ ಹಣತೆಗಳನ್ನು ಬೆಳಗಿಸಿದರು, ದೇವಸ್ಥಾನವು ದೀಪಾಲಂಕೃತಗೊಂಡು ಚಿನ್ನದಂತೆ ಹೊಳೆಯುತ್ತಿತ್ತು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter