ಬಂಟ್ವಾಳ: ಕರ್ನಾಟಕ ರಾಜ್ಯ ಕುಲಾಲ ಕುಂಬಾರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟ ಬಂಟ್ವಾಳ ವಿಧಾನ ಸಭಾ ಕ್ಷೇತ್ರ ,  ಗ್ರೇಸ್ ಪಾಲಿ ಕ್ಲಿನಿಕ್ ಲೋರೆಟ್ಟೋ ಪದವು,ಏ.ಜೆ.ಆಸ್ಪತ್ರೆ ಮಂಗಳೂರು ಇದರ ತಜ್ಞ ವೈದ್ಯರಿಂದ ‘ಉಚಿತ ಸಾರ್ವಜನಿಕ ವೈದ್ಯಕೀಯ ಶಿಬಿರ’ ಬಂಟ್ವಾಳ ಲೋರೆಟ್ಟೋ ಪದವು ಗ್ರೇಸ್ ಕಮರ್ಷಿಯಲ್ ರೆಸಿಡೆನ್ಸಿ ಕಟ್ಟಡದಲ್ಲಿ ನಡೆಯಿತು.

ಲೋರೆಟ್ಟೋ ಚರ್ಚ್ ನ  ಧರ್ಮಗುರು ಪ್ರಾನ್ಸಿಸ್ ಕ್ರಾಸ್ತಾ ಅವರು ಶಿಬಿರದ ಉದ್ಘಾಟನೆಗೈದರು.ಅಧ್ಯಕ್ಷತೆಯನ್ನು ವಾಲ್ ಸ್ಟೈಲ್ ನ ಜೋಸ್ಸಿ ಲೋಬೊ,ಬಂಟ್ವಾಳ ತಾಲೂಕು ಆರೋಗ್ಯ ಕೇಂದ್ರದ ವೈದ್ಯರಾದ ಡಾ. ಚೇತನ್ ರಾಜ್,ಕುಲಾಲ ಹಿರಿಯ ನಾಗರಿಕರ ಸಂಘದ ಸೋಮಯ್ಯ ಹನೈನಡೆ,ನಿರ್ಮಲ ಕಾನ್ವೆಂಟ್ ನ ಸಿಸ್ಟರ್ ಇಡೋಲಿನ್ ರೊಡ್ರಿಗಸ್,ಯುವ ವೇದಿಕೆ ಬಂಟ್ವಾಳದ ಅಧ್ಯಕ್ಷ ನಿತೀಶ್ ಕುಲಾಲ್ ಪಲ್ಲಿಕಂಡ ಉಪಸ್ಥಿತರಿದ್ದರು.

ಶಿಬಿರದಲ್ಲಿ ಕಣ್ಣು ತಪಾಸಣೆಗೈದು ಕನ್ನಡಕ ವಿತರಿಸಲಾಯಿತು,ರಿಯಾಯಿತಿ ದರದಲ್ಲಿ ಔಷಧಿ ನೀಡಲಾಯಿತು.ಸುಮಾರು 250 ಕ್ಕೂ ಫಲಾನುಭವಿಗಳು ಇದರ ಪ್ರಯೋಜನ ಪಡೆದರು.ವಿನ್ಸೆಂಟ್ ಸ್ವಾಗತಿಸಿ,ಟಿ. ಶೇಷಪ್ಪ ಮೂಲ್ಯ ವಂದಿಸಿದರು. 

By suddi9

Leave a Reply

Your email address will not be published. Required fields are marked *