Published On: Thu, Sep 14th, 2023

ಹವ್ಯಾಸಗಳು ಭವಿಷ್ಯವನ್ನೇ ಬದಲಾಯಿಸಬಲ್ಲದು :ಸುಮನ್

ಬಂಟ್ವಾಳ: ನಮ್ಮ ನಿರ್ಧಾರ ನಮ್ಮ ಕೈಯಲ್ಲಿದೆ,ಭವಿಷ್ಯವನ್ನು ಬದಲಾಯಿಸಲು ಸಾಧ್ಯವಿಲ್ಲದಿದ್ದರೂ ಹವ್ಯಾಸಗಳನ್ನು ಬದಲಾಯಿಸಬಹುದು, ಹವ್ಯಾಸಗಳು ನಮ್ಮ ಭವಿಷ್ಯವನ್ನೇ  ಬದಲಾಯಿಸಬಲ್ಲದು  ಎಂದು ದೇರಳಕಟ್ಟೆ  ಕೆ ಎಸ್ ಹೆಗ್ಡೆ ಆಸ್ಪತ್ರೆಯ ಆಪ್ತ ಸಮಾಲೋಚಕರಾದ
ಸುಮನ್  ಹೇಳಿದ್ದಾರೆ.

ವಿಟ್ಲ ಅಕ್ಷಯ ಸಮುದಾಯ ಭವನದಲ್ಲಿ  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆಯುತ್ತಿರುವ 1722 ನೇ ಮಧ್ಯವರ್ಜನ ಶಿಬಿರದಲ್ಲಿ ಕೊನೆಯ ದಿನದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಿಬಿರಾರ್ಥಿಗಳಿಗೆ ಅವರು ಮಾಹಿತಿ ನೀಡಿದರು.
ಒಬ್ಬ ಮಧ್ಯ ವ್ಯಸನಿಯಿಂದ ತನ್ನ ಕುಟುಂಬ,ಸಮಾಜಕ್ಕೆ ಯಾವ ರೀತಿಯಲ್ಲಿ ಸಮಸ್ಯೆ ಉಂಟು ಮಾಡುತ್ತಾನೆ,ಒಳ್ಳೆಯವನಾಗಿ ಸಮಾಜದಲ್ಲಿ ಗೌರವ ಸಿಗಬೇಕಾದರೆ ಜೀವನದಲ್ಲಿ ಬದಲಾಗಲೇಬೇಕು,ಶಿಬಿರಕ್ಕೆ ಯಾವ ಮನಸ್ಥಿತಿಯಲ್ಲಿ ಬಂದಿದ್ದೇವೆ ಎನ್ನುವುದು ಮುಖ್ಯವಲ್ಲ ಯಾವ ರೀತಿ ಬದಲಾಗಿ ವಾಪಸ್  ಹೋಗುತ್ತೇವೆ ಎನ್ನುವುದೇ ಮುಖ್ಯ ಎಂದರು.

ಈ ಸಂದರ್ಭದಲ್ಲಿ  ಶಿಬಿರ ಅಧಿಕಾರಿ ದೇವಿ ಪ್ರಸಾದ್ ವಿಟ್ಲ ಹಾಗೂ ಮಾಣಿ ವಲಯಕ್ಕೆ ಸಂಬಂಧಪಟ್ಟ ಒಕ್ಕೂಟಗಳ ಆದ್ಯಕ್ಷರುಗಳು,ಪದಾಧಿಕಾರಿಗಳು,ಸೇವಾ ಪ್ರತಿನಿಧಿಗಳು,ಶೌರ್ಯ ವಿಪತ್ತು ನಿರ್ವಹಣಾ  ತಂಡದ ಸದಸ್ಯರುಗಳು ಉಪಸ್ಥಿತರಿದ್ದರು. 

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter