Published On: Tue, Sep 13th, 2022

ಯುವ ಸಂಗಮ ಸೇವಾ ಟ್ರಸ್ಟ್ 30ನೇ ವರ್ಷದ ಗಣೇಶೋತ್ಸವದ ಅಧ್ಯಕ್ಷರಾಗಿ ಸುಧೀರ್ ನಿರ್ಮಾಲ್ ಆಯ್ಕೆ

ಬಂಟ್ವಾಳ: ಯುವ ಸಂಗಮ ಸೇವಾ ಟ್ರಸ್ಟ್(ರಿ) ಶೇಡಿಗುರಿ ಇದರ 29ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ವಾರ್ಷಿಕ ಮಹಾ ಸಭೆ ಯುವ ಸಂಗಮ ಸೇವಾ ಟ್ರಸ್ಟ್ ನ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ 29ನೇ ಸಾರ್ವಜನಿಕ ಗಣೇಶೋತ್ಸವದ ಖರ್ಚು ವೆಚ್ಚಗಳ ಲೆಕ್ಕ ಪತ್ರ ವನ್ನು ಸಮಿತಿ ಕಾರ್ಯದರ್ಶಿ ಕಿರಣ್ ರಾಜ್ ಸಭೆಯಲ್ಲಿ ತಿಳಿಸಿದರು. ಈ ಸಂದರ್ಭದಲ್ಲಿ 29ನೇ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದೇಜಪ್ಪ ಶೇಡಿಗುರಿ,ಟ್ರಸ್ಟ್ ಸದಸ್ಯ ಹರೀಶ್ ಸುವರ್ಣ ಯಶೋಧರ ಬಂಗೇರ ಕೊಲ್ಲೂರು, ಉಪಸ್ಥಿತರಿದ್ದರು.

ಇದೇ ಸಂಧರ್ಭದಲ್ಲಿ 2022-2023ನೇ ಸಾಲಿನ 30ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಧ್ಯಕ್ಷರಾಗಿ ಸುಧೀರ್ ನಿರ್ಮಾಲ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಲತೀಶ್ ರೆಂಜಮಾರ್,ಕಾರ್ಯದರ್ಶಿಯಾಗಿ ಹರೀಶ್ ಸುವರ್ಣ ಶೆಡಿಗುರಿ,ಜತೆ ಕಾರ್ಯದರ್ಶಿಯಾಗಿ ರಮೇಶ್ ಕೊಪ್ಪಲಕೋಡಿ,ಕೋಶಾಧಿಕಾರಿ ಮಿಥುನ್ ರೆಂಜಮಾರ್ ಸಂಚಾಲಕದರಾಗಿ ಯಶೋಧರ ಬಂಗೇರ ಕೊಲ್ಲೂರು ಆಯ್ಕೆಯಾದರು ಹಾಗೂ ಗೌರವ ಸಲಹೆಗಾರರಾಗಿ ಕೇಶವ ಅಂಚನ್ ಪದವು, ಕೃಷ್ಣಪ್ಪ ನಾಟಿ, ಗೋವಿಂದ ಏಳಬೆ, ನೋಣಯ್ಯ ರೆಂಜೆಮಾರ್, ಬೋಗನಾಥ ಎಳಬೆ,
ಜಗದೀಶ್ ರೆಂಜೆಮಾರ್, ಚಂದ್ರ ಕೊಪ್ಪಲಕೊಡಿ, ಪೂವಪ್ಪ ಪೂಜಾರಿ ಮಿತ್ತಿಲಕೊಡಿ, ಗೀತಾ ಶೇಡಿಗುರಿ, ಶಾಲಿನಿ ರೆಂಜೆಮಾರ್, ಸುನಿತಾ ರೆಂಜೆಮಾರ್ ಆಯ್ಕೆಯಾದರು ಕಿರಣ್ ರಾಜ್ ಸ್ವಾಗತಿಸಿ ವಂದಿಸಿದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter