Published On: Thu, Jul 21st, 2022

ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ

ಕಲ್ಲಡ್ಕ: ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜು.20ರಂದು ಬುಧವಾರ ವಿಜ್ಞಾನ ಸಂಘದ ವತಿಯಿಂದ “ವಿದ್ಯಾರ್ಥಿಗಳ ಚಿತ್ತ ವೃಕ್ಷಗಳತ್ತ” ಎಂಬ ಕಾರ್ಯಕ್ರಮವನ್ನು ಬಂಟ್ವಾಳ ಅರಣ್ಯ ಇಲಾಖೆಯ ಸಹಕಾರದೊಂದಿಗೆ ನಡೆಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಕ್ತಚಂದನ, ಸಾಗುವಾನಿ, ಮಹಾಗನಿ, ರಾಮಪತ್ರೆ, ಹೆಬ್ಬಲಸು, ಸೀತಾಫಲ, ಪೇರಳೆ, ಬೇವು, ಬಿಲ್ವ, ನೆಲ್ಲಿ ಮುಂತಾದ ಗಿಡಗಳನ್ನು ವಿತರಿಸಲಾಯಿತು.

ಕಾರ್ಯಕ್ರಮವನ್ನು ವಿಜ್ಞಾನ ಸಂಘದ ಸಂಯೋಜಕರಾದ ಜ್ಯೋತಿಶ್ರೀ ಸಿ.ಎಂ ಹಾಗೂ ರಮ್ಯ. ಜೆ ನಿರ್ವಹಿಸಿದರು. ಅಧ್ಯಾಪಕರಾದ ಬಾಲಕೃಷ್ಣ ಹಾಗೂ ಸುಮಂತ್ ಆಳ್ವ ಸಹಕರಿಸಿದರು. ಈ ಸಂದರ್ಭದಲ್ಲಿ ಮುಖ್ಯೋಪಾಧ್ಯಾಯರಾದ ರವಿರಾಜ್ ಕಣಂತೂರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter