Published On: Fri, Jun 17th, 2022

ಬೆಳ್ಳೂರು ಶ್ರೀ ಕೋರ‍್ದಬ್ಬು ದೈವಸ್ಥಾನದ ಪರಿಚಾರಕ ಗುರುವರಿಗೆ ಚಿನ್ನದ ಬಳೆ ಪ್ರದಾನ

ಕೈಕಂಬ: ಗುರುಪುರ ಬೆಳ್ಳೂರುಗುತ್ತಿನ ಶ್ರೀ ಕರ‍್ದಬ್ಬು ದೈವಸ್ಥಾನದಲ್ಲಿ ಹಲವು ವರ್ಷಗಳಿಂದ ಅರ್ಚಕರಾಗಿ ಸೇವೆ ಸಲ್ಲಿಸುತ್ತ ಬಂದಿರುವ ಗುರುವ ಅವರಿಗೆ ಜೂ.15ರಂದು ಬುಧವಾರ ಬೆಳಿಗ್ಗೆ ಬೆಳ್ಳೂರುಗುತ್ತಿನ ಕುಟುಂಬಿಕರು ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಚಿನ್ನದ ಬಳೆ ಪ್ರದಾನ ಕಾರ್ಯಕ್ರಮ ನಡೆಯಿತು.gur-june-16-kordabbu

ಪ್ರಸಕ್ತ ಸಾಲಿನ ಕೋಲೋತ್ಸವದ ಸಂದರ್ಭದಲ್ಲಿ ದೈವ ನುಡಿದಂತೆ ನಿರ್ದಿಷ್ಟ ದಿನದಂದು ಜೂ.೧೫ ಸಂಕ್ರಮಣದಂದು ಬಳೆ ಪ್ರದಾನಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳ್ಳೂರುಗುತ್ತು ರವೀಂದ್ರ ಶೆಟ್ಟಿ, ಯಶವಂತ ವಿ ಶೆಟ್ಟಿ, ಗರೋಡಿ ಮನೆ ಉಮೇಶ್ ಶೆಟ್ಟಿ, ಸದಾನಂದ ಗಾಂಭೀರ್, ದಿನೇಶ್ ಶೆಟ್ಟಿ, ದೈವಸ್ಥಾನದ ಪರಿಚಾರಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

Get Immediate Updates .. Like us on Facebook…

Visitors Count Visitor Counter