ಬಂಟ್ವಾಳ: ಜಿಲ್ಲಾ ಮೂರ್ತೆದಾರರ ಸಹಕಾರ ಮಹಾಮಂಡಲ ಇದರ ಆಡಳಿತ ಮಂಡಳಿಗೆ ಎಲ್ಲಾ ೧೩ ಮಂದಿ ನಿರ್ದೆಶಕರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಮಾಜಿ ಅಧ್ಯಕ್ಷ ಕೆ.ಸಂಜೀವ ಪೂಜಾರಿ, ಪುರುಷ ಸಾಲ್ಯಾನ್, ವಿಜಯ ಕುಮಾರ್ ಸೊರಕೆ, ಆರ್.ಸಿ.ನಾರಾಯಣ, ಕೆ.ವಿಶ್ವನಾಥ ಪೂಜಾರಿ ಪಂಜ, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ಹರೀಶ್ ಸುವರ್ಣ, ಪದ್ಮನಾಭ ಕೋಟ್ಯಾನ್, ಗಣೇಶ್ ಪೂಜಾರಿ, ರಾಜೇಶ್ ಸುವರ್ಣ, ಬೇಬಿ ಕುಂದರ್, ಶೈಲಜಾ, ಉಷಾ ಆಂಚನ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಸಹಕಾರ ಸಂಘಗಳ ಸಹಾಯಕ ನಿಬಂಧಕಿ ತ್ರಿವೇಣಿ ರಾವ್ ಕೆ. ಚುನಾವಣಾ ಪ್ರಕ್ರಿಯೆ ನಡೆಸಿದರು. ಮಹಾಮಂಡಳದ ಕಾರನಿರ್ವಾಹಣಧಿಕಾರಿ ಕಿಶೋರ್ ಕುಮಾರ್ ಇದ್ದರು.
