ಕೈಕಂಬ : ಗುರುಪುರ ಮಠದಬೈಲಿನ ಶ್ರೀ ನೀಲಕಂಠೇಶ್ವರ ಕಟ್ಟಡದಲ್ಲಿ ವ್ಯವಸ್ಥೆಗೊಳಿಸಲಾದ ಡಾ. ವಿದ್ಯಾ ದಾಮೋದರ್(ಇಎನ್ಟಿ, ಎಂಎಸ್) ಅವರ ‘ಭಿಷಕ್ ರತ್ನ’ ಕ್ಲಿನಿಕ್ನ್ನು ಫೆ. ೨೪ರಂದು ಮಂಗಳೂರಿನ ಹಿರಿಯ ವೈದ್ಯರಾದ ಡಾ. ಸನತ್ ಹೆಗ್ಡೆ ಹಾಗೂ ಗೋಳಿದಡಿಗುತ್ತು ವರ್ಧಮಾನ ದುರ್ಗಾಪ್ರಸಾದ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಸತೀಶ್ ಕಾವ ಬೆಳ್ಳಿಬೆಟ್ಟುಗುತ್ತು, ರಮೇಶ್ ಹೆಗ್ಡೆ ಬೆಳ್ಳಿಬೆಟ್ಟುಗುತ್ತು, ಉಷಾ ವರ್ಧಮಾನ ಶೆಟ್ಟಿ, ಶೃತಿ ಸನತ್ ಹೆಗ್ಡೆ ಮತ್ತಿತರರು ಉಪಸ್ಥಿತರಿದ್ದರು.

