ಪೊಳಲಿ: ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನ ಪಲ್ಲಿಪಾಡಿ ಬ್ರಹ್ಮಕಲಶೋತ್ಸವದ ಪ್ರಯುಕ್ತ ಫೆ.5 ರಂದು ಶನಿವಾರ ಬೆಳಿಗ್ಗೆ ಪೊಳಲಿ ಸುಬ್ರಹ್ಮಣ್ಯ ತಂತ್ರಿಗಳ ನೇತ್ರತ್ವದಲ್ಲಿ ವೈದಿಕ ಕಾರ್ಯಕ್ರಮಗಳ ಅಂಗವಾಗಿ ಪುಣ್ಯಾಹ, ಗಣಪತಿ ಹೋಮ, ನವಗ್ರಹಹೋಮ, ಅನುಜ್ಞಾ ಕಲಶಾಭಿಷೇಕ, ಸಂಹಾರ ತತ್ವ ಹೋಮ ನೆರವೇರಿತು.


ಈ ಸಂಧರ್ಭದಲ್ಲಿ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ. ರಘುನಾಥ ಸೋಮಯಾಜಿ, ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಭಾಸ್ಕರ ಭಟ್, ಭಾಸ್ಕರ ರಾವ್ ಪಲ್ಲಿಪಾಡಿ ಶ್ರೀ ಗೋಪಾಲಕೃಷ್ಣ ಲಕ್ಷ್ಮೀನರಸಿಂಹ ದೇವಸ್ಥಾನದ ಆಡಳಿತ ಮೊಕ್ತೇಸರ ಹಾಗೂ ಜೀರ್ಣೋದ್ಧಾರ, ಕಾರ್ಯಾಧ್ಯಕ್ಷ ವಿಷ್ಣು ಮೂರ್ತಿ ಭಟ್, ಕರಿಯಂಗಳ ಗ್ರಾಮಪಂಚಾಯತ್ ಅಧ್ಯಕ್ಷ ಜೀರ್ಣೋದ್ಧಾರ ಸಮಿತಿ ಉಪಾಧ್ಯಕ್ಷ ಚಂದ್ರಹಾಸ ಪಲ್ಲಿಪಾಡಿ, ಪೊಳಲಿ ವೆಂಕಟೇಶ್ ನಾವಡ, ರಮೇಶ್ ರಾವ್, ನರಸಿಂಹ ಮಯ್ಯ ಬಿಸಿ ರೋಡ್, ಸುಬ್ರಾಯ ಕಾರಂತ ಪೊಳಲಿ ಜೀರ್ಣೋದ್ಧಾರ ಸಮಿತಿ, ಸದಸ್ಯರು ಜೀರ್ಣೋದ್ಧಾರ ಸಮಿತಿ, ಪದಾಧಿಕಾರಿಗಳು ಇದ್ದರು.
ಸಾಂಸ್ಕೃತಿಕ ಕಾರ್ಯಕ್ರಮಗಳು: ಮಧ್ಯಾಹ್ನ ಗಂಟೆ ೨.೩೦ ರಿಂದ ೩.೩೦ವರೆಗೆ ಸಾಯಂಕಾಲ ೩.೩೦ ರಿಂದ ೧೩ರವರೆಗೆ ಅಗಸ್ಸೇಶ್ವರ ಭಜನಾ ಮಂಡಳಿ, ೩.೩೦ರಿಂದ ೪.೩೦ರವರೆಗೆ ದೇವರಗುಡ್ಡೆ, ಶ್ರೀ ಸೀತಾರಾಮ ಭಜನಾ ಮಂಡಳಿ ನಾರಳ ಭಜನಾ ಕಾರ್ಯಕ್ರಮ
ಸಾಯಂಕಾಲ ೪.೩೦ರಿಂದ ೫.೩೦ ರವರೆಗೆ ಹಿಂದೂಸ್ಥಾನಿ ಭಜನಾ ಕಾರ್ಯಕ್ರಮ ಸಪ್ತಸ್ವರ ಕಾರ್ತಿಕ್ ಮುಲ್ಕಿ ತಂಡದವರಿಂದ, ಸಾಯಂಕಾಲ ೫.೩೦ ರಿಂದ ರಾತ್ರಿ ೮.೦೦ ರವರೆಗೆ ಸುಬ್ರಹ್ಮಣೇಶ್ವರ ಕಲಾಕೇಂದ್ರ ತಕಮಿ ತಂಡ ಶ್ರೀ ರಾಮ ಸಭಾಂಗಣ ಗುರುಪುರ ಕೈಕಂಬ ತಂಡದ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ. ನಿರ್ದೇಶನ – ರಕ್ಷಿತ್ ಶೆಟ್ಟಿ ಪಡ್ರೆ

